ತಪ್ಪದೇ ನೋಡಿ : ಹಿರಣ್ಣಯ್ಯ ನಟನೆಯ ಲಂಚಾವತಾರ+ ಮಕ್ಮಲ್ ಟೋಪಿ
ಬೆಂಗಳೂರು, ಮೇ.25: ನಟ ರತ್ನಾಕರ ಮಾಸ್ಟರ್ ಹಿರಣ್ಣಯ್ಯ ಅವರ ಜಗತ್ ಪ್ರಸಿದ್ಧ ನಾಟಕಗಳಾದ ಲಂಚಾವತಾರ ಹಾಗೂ ಮಕ್ಮಲ್ ಟೋಪಿ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ. ಹಿರಣ್ಣಯ್ಯ ಹಾಗೂ ಅವರ ಪುತ್ರ ಬಾಬು ಹಿರಣ್ಣಯ್ಯ ಅವರು ನಿಮ್ಮನ್ನು ನಕ್ಕು ನಗಿಸಲು ಬರುತ್ತಿದ್ದಾರೆ.
ಕೆ.ಹಿರಣ್ಣಯ್ಯ ಮಿತ್ರ ಮಂಡಳಿ ಹಾಗೂ ಮಹಿಳಾ ದಕ್ಷತಾ ಸಮಿತಿ ಸಹಯೋಗದೊಂದಿಗೆ ಮಾಸ್ಟರ್ ಹಿರಣ್ಣಯ್ಯ ಅವರಿಂದ ಲಂಚಾವತಾರ ಹಾಗೂ ಮಕ್ಮಲ್ ಟೋಪಿ ನಾಟಕಗಳ ಪ್ರದರ್ಶನವನ್ನು ನಗರದ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಮೇ 27ರಂದು ಪ್ರದರ್ಶನಗೊಳ್ಳುತ್ತಿದೆ.
ಸಮಾಜದ
ಭ್ರಷ್ಟ
ವ್ಯವಸ್ಥೆ,
ರಾಜಕೀಯ
ವಿರುದ್ಧ
ಚಾಟಿ
ಬೀಸುವ
'ಲಂಚಾವತಾರ'
ಅಂದಿಗೂ
ಇಂದಿಗೂ
ಎಂದೆಂದಿಗೂ
ನವನವೀನ.
ಇದರ
ಜೊತೆಗೆ
ಮಕ್ಮಲ್
ಟೋಪಿ
ಕೂಡಾ
ಪ್ರೇಕ್ಷಕರಿಗೆ
ಬೋನಸ್
ಆಗಿ
ಸಿಗುತ್ತಿದೆ.
[ಬದುಕಿಗೆ
ಅಷ್ಟಿಷ್ಟು
ತಿಂದ್ರೆ
ತಪ್ಪೇನಿಲ್ಲ,
ಹಿರಣ್ಣಯ್ಯ
ಸಂದರ್ಶನ]
ದಿನಾಂಕ:
ಮೇ.27:
ಸ್ಥಳ:
ಚೌಡಯ್ಯ
ಸ್ಮಾರಕ
ಭವನ,
16ನೇ
ಅಡ್ಡರಸ್ತೆ,
2ನೇ
ಮುಖ್ಯರಸ್ತೆ,
ಮಲ್ಲೇಶ್ವರ,
ಬೆಂಗಳೂರು
ಸಮಯ:
6.30ರ
ನಂತರ
ಟಿಕೆಟ್
ದರ:
300
ರಿಂದ
2000
ರು
*
ಇದರ
ಜೊತೆಗೆ
ಪ್ರಹ್ಲಾದ್
ಅವರಿಂದ
ನೆರಳಿನ
ಆಟ,
ಮ್ಯಾಜಿಕ್
ಶೋ
ಹಾಗೂ
ಮಾತನಾಡುವ
ಬೊಂಬೆ
ಪ್ರದರ್ಶನಗಳನ್ನು
ಆಯೋಜಿಸಲಾಗಿದೆ.
*
ಜನಪ್ರಿಯ
ಹಾಸ್ಯಗಾರ
ರಾಮನಾಥ್
ವಿ
ಗುಂಡೂರಾವ್
ಅವರಿಂದ
ಹಾಸ್ಯ
ಕಾರ್ಯಕ್ರಮವಿರುತ್ತದೆ.
ಟಿಕೆಟ್ : Bookmyshow.com ಹಾಗೂ ಅಜಂತಾ ಹೋಟೆಲ್- ಎಂಜಿ ರಸ್ತೆ, ದಿಅವೆನ್ಯೂ-ಬ್ರಿಗೇಡ್ ರಸ್ತೆ, ಸೂಪರ್ ಮಾರ್ಕೆಟ್, ಮಂತ್ರಿ ಸ್ಕ್ವೇರ್- ಮಲ್ಲೇಶ್ವರಂ ಮುಂತಾದೆಡೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ-080-2364 1814 ಸಂಪರ್ಕಿಸಬಹುದು. (ಒನ್ ಇಂಡಿಯಾ ಸುದ್ದಿ)