ಫಸ್ಟ್ನೈಟ್ ದಿನವೇ ಗಂಡನಿಗೆ ಬಂತು ಹೆಂಡತಿಯ ರಾಸಲೀಲೆ ವಿಡಿಯೋ!
ಬೆಂಗಳೂರು, ಮಾರ್ಚ್ 19: ವಿವಾಹ ಪೂರ್ವ ಯುವಕ ಯುವತಿಯರ ಅಕ್ರಮ ಸಂಬಂಧಗಳು ವಿವಾಹದ ನಂತರ ಅವರ ಜೀವನದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸುವುದನ್ನು ನೋಡಿದ್ದೇವೆ. ಇಂತಹದೇ ಪ್ರಕರಣವೊಂದು ಇತ್ತೀಚಿಗೆ ಬೆಂಗಳೂರಿನಲ್ಲಿ ಸದ್ದು ಮಾಡಿದೆ.
ಪತ್ನಿಯೊಡನೆ ಆತ ಅಂದು ಮೊದಲ ರಾತ್ರಿಯ ಸುಮಧುರ ಕ್ಷಣಗಳಿಗೆ ಕಾತರನಾಗಿದ್ದ. ಆದರೆ, ಆ ರಾತ್ರಿ ಪತ್ನಿ ನೀಡಿದ ಶಾಕ್ಗೆ ಪತಿ ಮಹಾಶಯ ಸೀದಾ ಬೆಂಗಳೂರಿನ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ತೆರಳಿ ನನಗೆ ಮೋಸ ಆಗಿದೆ ಎಂದು ಕಣ್ಣೀರಿಟ್ಟಿದ್ದಾರೆ
ಮೈಸೂರಲ್ಲಿ ಪತ್ನಿಯ ಕೊಲೆಗೆ ಯತ್ನಿಸಿದ ಸಿಡಿಪಿಒ ಅಧಿಕಾರಿ
ಬೆಂಗಳೂರಿನ ಸರ್ಕಾರಿ ನೌಕರನೊಬ್ಬ ಇತ್ತೀಚೆಗೆ ಹಾಸನ ಮೂಲದ ಯುವತಿಯೊಂದಿಗೆ ಮದುವೆಯಾಗಿದ್ದ. ಮದುವೆಯಾದ ದಿನ ಮೊದಲ ರಾತ್ರಿ ಹೆಂಡತಿಯ ಪ್ರಿಯಕರ ಫೇಸ್ಬುಕ್ ಮೆಸೆಂಜರ್ಗೆ ಅಶ್ಲೀಲ ಫೋಟೊ ಮತ್ತು ವಿಡಿಯೋ ಕಳಿಸಿದ್ದ. ಇದರಿಂದ ನನ್ನ ಹೆಂಡತಿ ಮೋಸ ಬಯಲಾಗಿದೆ. ನನಗೆ ಮೋಸ ಆಗಿದೆ ಎಂದು ಆ ಸರ್ಕಾರಿ ನೌಕರ ಪೊಲೀಸ್ ಮೊರೆ ಹೋಗಿದ್ದಾನೆ. ಮುಂದೆ ಓದಿ........
ಹಾಸನದಲ್ಲಿ ಮದುವೆಯಾಗಿತ್ತು
2019ರ ನ.24ರಂದು 31 ವರ್ಷದ ಸರ್ಕಾರಿ ನೌಕರನಿಗೆ, ಸರಕಾರಿ ನೌಕರಿಯಲ್ಲೇ ಹಾಸನ ಮೂಲದ ಯುವತಿಯೊಂದಿಗೆ ಹಾಸನದಲ್ಲಿ ಮದುವೆಯಾಗಿತ್ತು. ಮದುವೆಗೆ ಸುಮಾರು 8 ಲಕ್ಷ ರೂ. ಖರ್ಚು ಮಾಡಿದ್ದೆವು. ಡಿ.15ರಂದು ನಮ್ಮ ಮೊದಲ ರಾತ್ರಿ ಇತ್ತು. ಆದರೆ ಆ ರಾತ್ರಿ ನನಗೆ ಸಿಡಿಲಾಘಾತವಾಗಿತ್ತು ಎಂದು ಆ ನೌಕರ ಪೊಲೀಸರ ಮುಂದೆ ಕಣ್ಣೀರಿಟ್ಟಿದ್ದಾರೆ.
ನಗ್ನಳಾಗಿ ಮತ್ತೊಬ್ಬನ ಜೊತೆ
ಮೊದಲ ರಾತ್ರಿ ಫೇಸ್ಬುಕ್ ಮೆಸೆಂಜರ್ನಲ್ಲಿ ವ್ಯಕ್ತಿಯೊಬ್ಬ ನನ್ನ ಪತ್ನಿ ನಗ್ನಳಾಗಿ ಮತ್ತೊಬ್ಬನ ಜೊತೆ ಇರುವ ಫೋಟೋ ಕಳುಹಿಸಿದ. ಆತ ನೀಡಿದ ಫೋನ್ ನಂಬರ್ಗೆ ಕರೆ ಮಾಡಿದಾಗ, ನಿಮ್ಮ ಪತ್ನಿ ಹಾಗೂ ಮತ್ತೊಬ್ಬ ಯುವಕ 7 ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಅವರಿಬ್ಬರ ನಡುವೆ ದೈಹಿಕ ಸಂಬಂಧ ಇದೆ. ನಿಶ್ಚಿತಾರ್ಥದ ನಂತರವೂ ಚಿಕ್ಕಮಗಳೂರು, ಬೇಲೂರು ಸುತ್ತಾಡಿ ರೆಸಾರ್ಟ್ಗಳಲ್ಲಿ ಉಳಿದುಕೊಂಡು ದೈಹಿಕ ಸಂಪರ್ಕ ಹೊಂದಿದ್ದಾರೆ ಎಂದು ಹೇಳಿದ್ದ ಇಬ್ಬರ ನಡುವಿನ ವಾಟ್ಸ್ಆ್ಯಪ್ ಚಾಟಿಂಗ್ ಹಾಗೂ ವಿಡಿಯೋಗಳು ಕೂಡ ನೊಡಿದೆ ಎಂದು ದೂರಿನಲ್ಲಿ ಸಂತ್ರಸ್ತ ವ್ಯಕ್ತಿ ಆರೋಪಿಸಿದ್ದಾರೆ.
ನಂಬಿಕೆ ದ್ರೋಹ ಮಾಡಿದ್ದಾರೆ
ಈ ಕುರಿತು ಹಾಸನದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕೂಡ ದೂರು ದಾಖಲಾಗಿದೆ. ಪೊಲೀಸರ ವಿಚಾರಣೆ ವೇಳೆ ಇನ್ನೊಬ್ಬನ ಜತೆ ಸಂಬಂಧ ಹೊಂದಿರುವುದನ್ನು ಪತ್ನಿ ಒಪ್ಪಿಕೊಂಡಿದ್ದಳು. ಈ ವಿಷಯವನ್ನು ಯುವತಿ ಮತ್ತು ಆಕೆಯ ಕುಟುಂಬದವರು ಮುಚ್ಚಿಟ್ಟು ಮದುವೆ ಮಾಡಿ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ನೌಕರ ಆರೋಪಿಸಿದ್ದಾರೆ.
ನೆಮ್ಮದಿ ಕಳೆದುಕೊಂಡಿದ್ದೇನೆ
ಇಷ್ಟಾದರೂ ನನ್ನ ಬಗ್ಗೆಯೇ ಸಮಾಜದಲ್ಲಿ ಕೆಟ್ಟದಾಗಿ ಮಾತನಾಡಿಕೊಂಡು ಪತ್ನಿ ಮತ್ತು ಆಕೆಯ ಕುಟುಂಬದವರು ಓಡಾಡುತ್ತಿದ್ದಾರೆ. ಹಣ, ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದೇನೆ. ಅದಕ್ಕಾಗಿ ಕೈ ಸಾಲ ಮತ್ತು ಬ್ಯಾಂಕ್ ಸಾಲ ಮಾಡಿದ್ದೇವೆ. ಯುವತಿ ಮತ್ತು ಆಕೆಯ ಕುಟುಂಬ ಸದಸ್ಯರು ಸೇರಿ ಆರು ಜನರ ವಿರುದ್ಧ ಕ್ರಮ ಜರುಗಿಸುವಂತೆ ದೂರಿನಲ್ಲಿ ಯುವಕ ಕೋರಿದ್ದಾರೆ.