ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಗನಿಗೆ ಬೈದಿದ್ದಕ್ಕೆ ಚಾಕುವಿನಿಂದ ಯುವಕನನ್ನು ಇರಿದ ತಂದೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 13: ಇತ್ತೀಚಿನ ದಿನಗಳಲ್ಲಿ ಯಾವ ವಿಚಾರವನ್ನೂ ಸಮಾಧಾನದಿಂದ ಕೇಳುವ ತಾಳ್ಮೆಯೇ ಹೊರಟು ಹೋಗಿದೆ.

ಹೆತ್ತ ತಾಯಿಯನ್ನೇ ಹೊಡೆದ 17ರ ಯುವಕನಿಗೆ ಊರೆಲ್ಲ ಛೀ, ಥೂ... ಹೆತ್ತ ತಾಯಿಯನ್ನೇ ಹೊಡೆದ 17ರ ಯುವಕನಿಗೆ ಊರೆಲ್ಲ ಛೀ, ಥೂ...

ಮನೆಯ ತಾರಸಿ ಮೇಲೆ ಬಂದು ಆಟವಾಡುತ್ತಿದ್ದ ಬಾಲಕನಿಗೆ ಆಟವಾಡಬೇಡ ಇಲ್ಲಿ ಎಂದು ಹೇಳಿದ ಕಾರಣಕ್ಕೆ ಮಗುವಿನ ತಂದೆ ಯುವಕನಿಗೆ ಚೂರಿಯಿಂದ ತಿವಿದಿರುವ ಘಟನೆ ಬೆಂಗಳೂರಿನ ಕುಪ್ಪಸ್ವಾಮಿ ಬಡಾವಣೆಯಲ್ಲಿ ನಡೆದಿದೆ.

ರಕ್ತದ ಮಡುವಿನಲ್ಲಿದ್ದರೂ ಹೆಂಡತಿಗೆ ಕರೆ ಮಾಡಿ ನನ್ನನ್ನು ಬದುಕಿಸು ಎಂದಿದ್ದ ಸೈಯದ್ ರಕ್ತದ ಮಡುವಿನಲ್ಲಿದ್ದರೂ ಹೆಂಡತಿಗೆ ಕರೆ ಮಾಡಿ ನನ್ನನ್ನು ಬದುಕಿಸು ಎಂದಿದ್ದ ಸೈಯದ್

ಪಾಷಾ ಹಲ್ಲೆಗೊಳಗಾದವರು, ಅವರು ತೀವ್ರವಾಗಿ ಗಾಯಗೊಂಡಿದ್ದು,ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೀವಕ್ಕೇನು ಅಪಾಯವಿಲ್ಲ ಆದರೆ ತೀವ್ರ ನಿಗಾದಲ್ಲಿ ಇಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

Man stabs youth for scolding his child

ಬಾಲಕನ ತಂದೆ ಅಬ್ದುಲ್ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ. ಪಾಷಾ ಮನೆಯಲ್ಲಿ ಮಲಗಿದ್ದಾಗ ಬಾಲಕ ಮನೆಯ ತಾರಸಿಗೆ ಬಂದು ಆಟವಾಡುತ್ತಿದ್ದ ಹಾಗಾಗಿ ಇಲ್ಲಿ ಆಟವಾಡಬೇಡ ಎಂದು ಗದರಿಸಿದ್ದರು.

ಶಿವನಸಮುದ್ರದಲ್ಲಿ ನವದಂಪತಿ ಶವ ಪತ್ತೆ: ಮರ್ಯಾದಾ ಹತ್ಯೆ ಶಂಕೆ ಶಿವನಸಮುದ್ರದಲ್ಲಿ ನವದಂಪತಿ ಶವ ಪತ್ತೆ: ಮರ್ಯಾದಾ ಹತ್ಯೆ ಶಂಕೆ

ಬಳಿಕ ಬಾಲಕ ಅಳುತ್ತಾ ಮನೆಗೆ ಹೋಗಿದ್ದು ತಂದೆಗೆ ಈ ವಿಷಯ ತಿಳಿಸಿದ್ದಾನೆ ಇದನ್ನು ಕೇಳಿದ ಕೂಡಲೇ ಪಾಷಾ ಮನೆಗೆ ಬಂದು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಒಮ್ಮೆ ನೆರೆಮನೆಯವರೆಲ್ಲ ಸೇರಿ ಜಗಳವನ್ನು ನಿಲ್ಲಿಸಿದ್ದರು ಆದರೆ ಅಬ್ದುಲ್ ಈ ವಿಚಾರವನ್ನು ಅಲ್ಲಿಗೆ ಬಿಡದೆ ಮಾತು ಮುಂದುವರೆಸಿ ಮಾತಿಗೆ ಮಾತು ಬೆಳೆದು ಜಗಳವಾಗಿದೆ.ಬಳಿಕ ಚಾಕುವಿನಿಂದ ಆತನಿಗೆ ತಿವಿದು ಘಾಸಿಗೊಳಿಸಿದ್ದಾನೆ.

English summary
A 21 year old youth was brutally attacked by a neighbour aftet he objected to the latter's son playing on the terrace of his house
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X