ಕ್ಯಾನ್ಸರ್ ಇದೆ ಸಿಗರೇಟ್ ಸೇದ್ಬೇಡಿ ಎಂದಿದ್ದಕ್ಕೆ ಪತ್ನಿಗೆ ಕಣ್ಣಿಗೆ ಚಾಕುವಿನಿಂದ ಇರಿದ ಪತಿ
ಬೆಂಗಳೂರು, ಫೆಬ್ರವರಿ 22: ಸಿಗರೇಟ್ ಸೇದಬೇಡ ಎಂದು ಬುದ್ಧಿಮಾತು ಹೇಳಿದ್ದಕ್ಕೆ ಪತಿ ಚಾಕುವಿನಿಂದ ಪತ್ನಿ ಕಣ್ಣಿಗೆ ಇರಿದು ಹಲ್ಲೆ ನಡೆಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಬಾಣಸವಾಡಿಯಲ್ಲಿ ಈ ಘಟನೆ ನಡೆದಿದ್ದು, ಗಾಯತ್ರಿ ಇರಿತಕ್ಕೊಳಗಾದ ಮಹಿಳೆ, ಧರ್ಮ ದುಶ್ಚಟಗಳ ದಾಸನಾಗಿದ್ದ, ಮದುವೆಗೂ ಮುನ್ನ ಎಲ್ಲರಂತೆಯೇ ಗಾಯತ್ರಿ ಒಳ್ಳೆಯ ಗಂಡ ಸಿಗಬೇಕು, ಆರೋಗ್ಯವಂತನಾಗಿರಬೇಕು ಎಂದು ಆಸೆ ಪಟ್ಟಿದ್ದಳು. ಆದರೆ ಅವಳು ಅಂದುಕೊಂಡಂತೆ ಆಗಲಿಲ್ಲ.
ಕರ್ಕಶ ಹಾರ್ನ್ ಪ್ರಶ್ನಿಸಿದ್ದಕ್ಕೆ ಮೂವರು ಯುವಕರಿಗೆ ಚಾಕು ಇರಿತ
ಧರ್ಮ(ಪತಿ) ಯಾವುದೇ ಕೆಲಸ ಮಾಡುತ್ತಿರಲಿಲ್ಲ, ದಿನ ಪೂರ್ತಿ ಕುಡಿಯುತ್ತಿದ್ದ, ಸಿಗರೇಟು ಸೇದುತ್ತಿದ್ದ, ಗಾಯತ್ರಿ ಗಾರ್ಮೆಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಕೆಲವು ತಿಂಗಳುಗಳ ಹಿಂದೆ ಧರ್ಮನಿಗೆ ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಂಡಿತ್ತು.
ಶಿವಮೊಗ್ಗ: ಸಪ್ತಪದಿ ವೇಳೆ ವಧುವಿನ ಕುತ್ತಿಗೆ ಸೀಳಿದ ಭಗ್ನಪ್ರೇಮಿ
ಹಾಗಾಗಿ ಈ ಎಲ್ಲಾ ದುಶ್ಚಟಗಳನ್ನು ಬಿಟ್ಟು, ಆರೋಗ್ಯವಾಗಿ ಬದುಕಿ ಎಂದು ತಿಳಿ ಹೇಳಿದ ಹೆಂಡತಿಯ ಕಣ್ಣಿಗೆ ಇರಿದಿದ್ದಾನೆ.