ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೂಜಾಡಲು ಹಣ ನೀಡಲಿಲ್ಲ ಎಂದು ತಂದೆಗೆ ಇರಿದ ಮಗ

|
Google Oneindia Kannada News

ಬೆಂಗಳೂರು, ಫೆಬ್ರವರಿ 11: ಮಗ ದುಶ್ಚಟಗಳ ದಾಸನಾಗಿದ್ದ ಆತನ ಹಿತದೃಷ್ಟಿಯಿಂದ ಜೂಜಾಡಲು ಹಣ ನೀಡದಿರುವ ಕಾರಣ ಮಗನೊಬ್ಬ ತಂದೆಗೆ ಚಾಕುವಿನಿಂದ ತಿವಿದು ಘಾಸಿಗೊಳಿಸಿರುವ ಘಟನೆ ನಡೆದಿದೆ.

ಗಿರಿನಗರ ಬಳಿಯ ದ್ವಾರಕಾನಗರ ನಿವಾಸಿ ಸಂತೋಷ್(28) ಆರೋಪಿ, ಈತನ ತಂದೆ ರಾಮಪ್ಪ ಹಲ್ಲೆಗೊಳಗಾದವರು. ರಾಮಪ್ಪ ಅವರ ಆಟೋವನ್ನು ಸಂತೋಷ್ ಓಡಿಸುತ್ತಿದ್ದ, ಆತನಿಗೆ ಕೆಲವು ವರ್ಷಗಳಿಂದ ಇಸ್ಪೀಟ್ ಆಡುವ ಚಟವಿತ್ತು. ಈ ಹಿಂದೆ ಸಾವಿರಾರು ರೂ ಕಳೆದುಕೊಂಡಿದ್ದ. ತಾನು ಕಳೆದುಕೊಂಡ ಹಣವನ್ನು ವಾಪಸ್ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಇಸ್ಪೀಟ್ ಆಡಲು ಹೋಗುತ್ತಿದ್ದ.

Man hits dad for refusing money for gambling

ಕೇವಲ 24 ಗಂಟೆಗಳಲ್ಲಿ ಕೊಲೆಗಾರರನ್ನು ಪತ್ತೆ ಹಚ್ಚಿದ ಮೈಸೂರು ಪೊಲೀಸರುಕೇವಲ 24 ಗಂಟೆಗಳಲ್ಲಿ ಕೊಲೆಗಾರರನ್ನು ಪತ್ತೆ ಹಚ್ಚಿದ ಮೈಸೂರು ಪೊಲೀಸರು

ರಾತ್ರಿ ಪರಿಚಿತರ ಜೊತೆ ಜೂಜು ಆಡಿದ್ದ ಸಂತೋಷ್ 20 ಸಾವಿರ ರೂ ಕಳೆದುಕೊಂಡಿದ್ದ, ಆದರೆ ಜೂಜು ಗೆದ್ದವರಿಗೆ ನೀಡಲು ಹಣವಿರಲಿಲ್ಲ. ಈ ಹಿನ್ನೆಲೆಯಲ್ಲಿ ತಡರಾತ್ರಿ 3 ಗಂಟೆಗೆ ಅವರನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದ, 1 ಲಕ್ಷ ರೂ ನೀಡುವಂತೆ ತಂದೆಗೆ ಪೀಡಿಸಿದ್ದ ಅದನ್ನು ನಿರಾಕರಿಸಿದ್ದಕ್ಕೆ ತಂದೆಗೆ ಚಾಕುವಿನಿಂದ ಇರಿದಿದ್ದ ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.

English summary
A man was arrested for allegedly attacking his 60-year-old father who refused to give him money for gambling. This happened at Dwarakanagar, Girinagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X