ಇಬ್ಬಲೂರು ಬಳಿ ಲಾರಿ ಡಿಕ್ಕಿ ಪಾದಚಾರಿ ಸಾವು: ಸಿಲ್ಕ್ಬೋರ್ಡ್ ವರೆಗೆ ಟ್ರಾಫಿಕ್ ಜಾಮ್
ಬೆಂಗಳೂರು, ಜನವರಿ 12: ಬೆಂಗಳೂರಿನ ಇಬ್ಬಲೂರು ಜಂಕ್ಷನ್ ಬಳಿ ಅಪಘಾತ ಸಂಭವಿಸಿದ್ದು, ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಂಡ್ಯ ಭೀಕರ ದುರಂತ: ದುರಂತದಲ್ಲಿ ಮೃತಪಟ್ಟ 25 ಜನರ ಹೆಸರುಗಳು
ಸಿಮೆಂಟ್ ತುಂಬಿದ್ದ ಲಾರಿ ಪಾದಚಾರಿ ದೊಡ್ಡ ಮುನಿಯಪ್ಪ ಎನ್ನುವವರ ಮೇಲೆ ಹರಿದಿದ್ದು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರು ರಸ್ತೆ ದಾಟುವಾಗ ಈ ಅವಗಢ ಸಂಭವಿಸಿದೆ ಎನ್ನಲಾಗಿದೆ.
ಮಂಡ್ಯ ಬಸ್ ಅಪಘಾತ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ
ಸ್ಥಳೀಯರು ಆಕ್ರೋಶಗೊಂಡು ಕಳೆದ ಒಂದು ಗಂಟೆಯಿಂದ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಇಬ್ಬಲೂರು, ಸಿಲ್ಕ್ ಬೋರ್ಡ್ ಮಾರ್ಗ, ಮಾರತ್ತಹಳ್ಳಿ ಒಟ್ಟು 6 ಕಿ.ಮೀ ಟ್ರಾಫಿಕ್ ಜಾಮ್ ಉಂಟಾಗಿದೆ.
ಅಷ್ಟೇ ಅಲ್ಲದೆ ಆ ಲಾರಿಗೆ ಲಾರಿಯ ಮೇಲೆ ಕಲ್ಲು ತೂರಾಟ ನಡೆಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಟ್ರಾಫಿಕ್ ಪಲೀಸರು ಆಗಮಿಸಿ ಕ್ರಷರ್ ಲಾರಿಗಳು ಆ ಮಾರ್ಗದಲ್ಲಿ ಬಾರದಂತೆ ತಡೆದಿದ್ದಾರೆ. ವಾಹನಗಳ ಸಂಚಾರ ಎಂದಿನಂತೆ ಆಗಲು ಇನ್ನೂ ಎರಡರಿಂದ ಮೂರು ಗಂಟೆಗಳ ಸಮಯವಕಾಶ ಬೇಕಾಗುತ್ತದೆ.