ಬೆಂಗಳೂರು: ಕಳ್ಳನ ಬಂಧನ- 32 ಬೈಕ್ ವಶಕ್ಕೆ
ಬೆಂಗಳೂರು, ಜೂ.30: ನಕಲಿ ಕೀ ಬಳಸಿ ದ್ವಿಚಕ್ರ ವಾಹನ ದೋಚುತ್ತಿದ್ದ ಕಳ್ಳನನ್ನು ಕಾಡುಗೋಡಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ 20 ಲಕ್ಷ ರೂ. ಮೌಲ್ಯದ 32 ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಮಾರತ್ಹಳ್ಳಿ ಪವನ್ ಕುಮಾರ್ ರೆಡ್ಡಿ(19) ಬಂಧಿತ ಆರೋಪಿ. ಏಳು ತಿಂಗಳ ಕಾಲ ಗ್ಯಾರೇಜ್ನಲ್ಲಿ ಕೆಲಸ ಮಾಡಿದ್ದ ಇವನು ಬಳಿಕ ಬೈಕ್ ಕಳ್ಳತನ ಮಾಡಿ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಬೈಕ್ ಖರೀದಿಸುವ ಗ್ರಾಹಕರ ಸೋಗಿನಲ್ಲಿ ಪೊಲೀಸರು ತೆರಳಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಎಲ್ಲಾ ಪ್ರಕರಣಗಳನ್ನು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ.ಟಿ.ಡಿ. ಪವಾರ್ ಹಾಗೂ ಏರ್ಪೋರ್ಟ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಎಸ್.ಹೆಚ್.ದುಗ್ಗಪ್ಪ ರವರುಗಳ ಮಾರ್ಗದರ್ಶನದಲ್ಲಿ ಕಾಡುಗೋಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸಿ. ಬಾಲಕೃಷ್ಣ ಹಾಗೂ ಪಿ.ಎಸ್.ಐ ಪ್ರದೀಪ್ ಸಿಂಗ್, ಎ.ಎಸ್.ಐ ರಾಜಣ್ಣ ಹಾಗೂ ಸಿಬ್ಬಂದಿಯವರಾದ ಚಂದ್ರಶೇಖರ್, ಶಿವಸ್ವಾಮಿ ಪ್ರಭುಗೌಡ, ಮಮತೇಶ್ಗೌಡ, ರಾಜಗೋಪಾಲ, ಗಂಗರಾಜು ಮತ್ತು ಮಂಜುನಾಥ.ಕೆ. ಕಾರ್ಯಾಚರಣೆ ನಡೆಸಿ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.