ಮಲ್ಲೇಶ್ವರಂ ಸ್ಫೋಟ : 2 ಸಾವಿರ ರೂ.ಗೆ ಸ್ಫೋಟಕ ಮಾರಾಟ
ಬೆಂಗಳೂರು, ಜೂನ್ 14 : ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿ ನಡೆದ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಡೆನಿಯಲ್ ಪ್ರಕಾಶ್ ಬಂಧನದಿಂದ ಚುರುಕಾಗಲಿದೆ. ಪ್ರಕಾಶ್ ಸ್ಫೋಟಕ್ಕೆ ಅಗತ್ಯವಿದ್ದ ಜಿಲೆಟಿನ್ ಕಡ್ಡಿಗಳನ್ನು 2 ಸಾವಿರ ರೂ.ಗಳಿಗೆ ಮಾರಾಟ ಮಾಡಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸಿಸಿಬಿ ಪೊಲೀಸರು ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಡೆನಿಯಲ್ ಪ್ರಕಾಶ್ನನ್ನು ಸೋಮವಾರ ಸಂಜೆ ಬಂಧಿಸಿದ್ದಾರೆ. ಪ್ರಾಥಮಿಕ ವಿಚಾರಣೆ ವೇಳೆ ತನ್ನ ಬಾಲ್ಯದ ಗೆಳೆಯ ಸೈಯದ್ ಅಲಿಗೆ ಜಿಲೆಟಿನ್ ಕಡ್ಡಿಗಳನ್ನು ಮಾರಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. [ಮಲ್ಲೇಶ್ವರಂ ಸ್ಫೋಟ : ಮುಖ್ಯ ಆರೋಪಿ ಡೇನಿಯಲ್ ಬಂಧನ]
2 ಸಾವಿರ ರೂ.ಗಳಿಗೆ ಜಿಲೆಟಿನ್ ಕಡ್ಡಿ ಮತ್ತು ಇತರ ಸ್ಫೋಟಕಗಳನ್ನು ಪ್ರಕಾಶ್ ಮಾರಾಟ ಮಾಡಿದ್ದ. ಆದರೆ, ಸೈಯದ್ ಅವುಗಳನ್ನು ಏಕೆ ಖರೀದಿ ಮಾಡಿದ್ದ? ಎಂಬುದು ಆತನಿಗೆ ತಿಳಿದಿರಲಿಲ್ಲ. ಜಿಲೆಟಿನ್ ಕಡ್ಡಿಗಳನ್ನು ಕದ್ದು, ಕಲ್ಲು ಕ್ವಾರಿಗಳಿಗೆ ಮಾರಾಟ ಮಾಡುವುದೇ ಪ್ರಕಾಶ್ ಕೆಲಸವಾಗಿತ್ತು. [ಬೆಂಗಳೂರು ಸ್ಫೋಟ : ಮದನಿ ವಿರುದ್ಧ ಉಲ್ಟಾ ಹೊಡೆದ ಸಾಕ್ಷಿಗಳು]
ಅಂದು ಏನಾಗಿತ್ತು? : 2013ರ ಏಪ್ರಿಲ್ 17ರಂದು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಮುಂಭಾಗದಲ್ಲಿ ಸ್ಫೋಟ ನಡೆದಿತ್ತು. ಹೈದರಾಬಾದ್ನಿಂದ ಕದ್ದು ತಂದಿದ್ದ ಬೈಕ್ನಲ್ಲಿ ಸ್ಫೋಟಕಗಳನ್ನು ಇಟ್ಟು, ಅದನ್ನು ಸ್ಫೋಟಿಸಲಾಗಿತ್ತು. ಈ ಸ್ಫೋಟದಲ್ಲಿ 16 ಜನರು ಗಾಯಗೊಂಡಿದ್ದರು. [ಬಾಂಬ್ ಸ್ಫೋಟ ರೂವಾರಿ ಬುಹಾರಿ ತಪ್ಪೊಪ್ಪಿಗೆ]
ತಮಿಳುನಾಡಿನ ಪುಡುಕೋಡಿ ಬಳಿ ನೀರಾವರಿ ಯೋಜನೆಯ ಕೆಲಸ ನಡೆಯುತ್ತಿತ್ತು. ಅಲ್ಲಿ ಬಳಕೆ ಮಾಡಲು ಜಿಲೆಟಿನ್ ಕಡ್ಡಿಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಅಲ್ಲಿಂದ ಕಡ್ಡಿಗಳನ್ನು ಕದ್ದಿದ್ದ ಪ್ರಕಾಶ್ ಸೈಯದ್ಗೆ ಮಾರಾಟ ಮಾಡಿದ್ದ.