ಲೋಕಾಯುಕ್ತದಲ್ಲಿ ಭ್ರಷ್ಟಾಚಾರ: ನ್ಯಾ. ಭಾಸ್ಕರ್ ರಾವ್ ಗೆ ಜಾಮೀನು
ಲೋಕಾಯುಕ್ತದಲ್ಲಿ ಅಧಿಕಾರ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ಪಡೆದುಕೊಂಡಿದ್ದ ನ್ಯಾ. ವೈ ಭಾಸ್ಕರ್ ರಾವ್ ಅವರಿಗೆ ವಿಶೇಷ ನ್ಯಾಯಾಲಯದಿಂದ ಸೋಮವಾರ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.
ಬೆಂಗಳೂರು, ನವೆಂಬರ್ 28: ಲೋಕಾಯುಕ್ತದಲ್ಲಿ ಅಧಿಕಾರ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ಪಡೆದುಕೊಂಡಿದ್ದ ನ್ಯಾ. ವೈ ಭಾಸ್ಕರ್ ರಾವ್ ಅವರಿಗೆ ವಿಶೇಷ ನ್ಯಾಯಾಲಯದಿಂದ ಸೋಮವಾರ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.
ನ್ಯಾ. ಡಿಟಿ ದೇವೆಂದ್ರನ್ ಅವರು 1 ಲಕ್ಷ ಬಾಂಡ್ ಇಬ್ಬರ ಶ್ಯೂರಿಟಿ ಪಡೆದು ನ್ಯಾ. ಭಾಸ್ಕರ್ ರಾವ್ ಅವರಿಗೆ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದ್ದಾರೆ. [ಹೈಕೋರ್ಟಿನಲ್ಲಿ ನ್ಯಾ. ವೈ ಭಾಸ್ಕರ್ ರಾವ್ ಅರ್ಜಿ ವಜಾ]
ತಮ್ಮ ಮೇಲಿನ ಚಾರ್ಜ್ ಶೀಟ್ ರದ್ದುಗೊಳಿಸುವಂತೆ ಕೋರಿ ಹೈಕೋಟಿಗೆ ನ್ಯಾ. ಭಾಸ್ಕರ್ ರಾವ್ ಅವರು ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟಿನಲ್ಲಿ ನವೆಂಬರ್ 22ರಂದು ಅರ್ಜಿ ವಜಾಗೊಂಡಿತ್ತು. ಹೀಗಾಗಿ, ಸೋಮವಾರ ವಿಚಾರಣೆಗೆ ಖುದ್ದು ಹಾಜರಾಗಿದ್ದರು. ಈ ಪ್ರಕರಣದಲ್ಲಿ ಇಲ್ಲಿ ತನಕ 11 ಜನ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ನ್ಯಾ.ವೈ ಭಾಸ್ಕರ್ ರಾವ್ ಅವರು 7ನೇ ಆರೋಪಿಯಾಗಿದ್ದಾರೆ
ಮೊದಲಿಗೆ ಈ ಪ್ರಕರಣವನ್ನು ಹಿರಿಯ ಪೊಲೀಸ್ ಅಧಿಕಾರಿ ಲೋಕಾಯುಕ್ತ ಎಸ್ಪಿಯಾಗಿದ್ದ ಸೋನಿಯಾ ನಾರಂಗ್ ಅವರ ನೇತೃತ್ವದ ತಂಡ ವಹಿಸಿಕೊಂಡಿತ್ತು. ನಂತರ ಉಪ ಲೋಕಾಯುಕ್ತ ಸುಭಾಷ್ ಬಿ ಆಡಿ ಅವರಿಂದ ತನಿಖೆ, ಆಮೇಲೆ ವಿಶೇಷ ತನಿಖಾ ತಂಡ(ಎಸ್ ಐಟಿ)ಕ್ಕೆ ಪ್ರಕರಣದ ತನಿಖೆ ಜವಾಬ್ದಾರಿ.
ಪ್ರಕರಣಕ್ಕೆ
ಸಂಬಂಧಿಸಿದಂತೆ
11
ಜನರ
ಬಂಧನ,
ಜಾಮೀನಿನ
ಮೇಲೆ
ಬಿಡುಗಡೆ,
ಆಗಸ್ಟ್
ತಿಂಗಳಿನಲ್ಲಿ
ಸಲ್ಲಿಸಲಾದ
ದೋಷಾರೋಪಣ
ಪಟ್ಟಿಯಲ್ಲಿ
ವೈ
ಭಾಸ್ಕರ್
ರಾವ್
ಅವರು
7ನೇ
ಆರೋಪಿ.
ಹೈಕೋರ್ಟಿನಿಂದ
ಭಾಸ್ಕರ್
ರಾವ್
ಗೆ
ಸಮನ್ಸ್
ಜಾರಿ.
ನವೆಂಬರ್
28ರಂದು
ಲೋಕಾಯುಕ್ತ
ವಿಶೇಷ
ನ್ಯಾಯಾಲಯದ
ಕಟಕಟೆ
ಏರಿದ್ದರು.
ಎಸ್ ಐಟಿ ಸಲ್ಲಿಸಿದ ಚಾರ್ಜ್ ಶೀಟ್ ರದ್ದುಗೊಳಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸಿದ್ದ ನ್ಯಾ. ವೈ ಭಾಸ್ಕರ್ ರಾವ್ ಅವರು ನ್ಯಾಯಮೂರ್ತಿಗಳ ರಕ್ಷಣಾ ಕಾಯ್ದೆ ಉಲ್ಲೇಖಿಸಿದರೂ ಪ್ರಯೋಜನವಾಗಲಿಲ್ಲ. ವಿಶೇಷ ಅಭಿಯೋಜಕ ಪಿಎಸ್ ಜಾಧವ್ ಅವರ ವಾದ ಪುರಸ್ಕರಿಸಿದ ಹೈಕೋರ್ಟ್ ನ್ಯಾ ಆನಂದ್ ಭೈರಾರೆಡ್ಡಿ ಅವರು ವೈ ಭಾಸ್ಕರ್ ರಾವ್ ಅವರ ಅರ್ಜಿಯನ್ನು ತಿರಸ್ಕರಿತಿರಸ್ಕರಿಸಿದ್ದರು.