ಬಸವನಗುಡಿಯಲ್ಲಿ ಮತಚಲಾಯಿಸಿದ ತೇಜಸ್ವಿನಿ ಅನಂತಕುಮಾರ್
ಬೆಂಗಳೂರು, ಏಪ್ರಿಲ್ 18: ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಅವರು ಲೋಕಸಭೆ ಚುನಾವಣೆಗೆ ಗುರುವಾರ ಬೆಂಗಳೂರಿನ ಬಸವನಗುಡಿಯಲ್ಲಿ ಮತಚಲಾಯಿಸಿದರು. ಅವರೊಟ್ಟಿಗೆ ಕುಟುಂಬಸ್ಥರೂ ಜೊತೆಯಾಗಿದ್ದರು.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಅವರು ಮತದಾನದ ಹಕ್ಕು ಪಡೆದಿದ್ದು, ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಸವನಗುಡಿಯ ವಾಸವಿ ವಿದ್ಯಾ ನಿಕೇತನ ಶಾಲೆಯ ಮತಗಟ್ಟೆಯಲ್ಲಿ ಅವರು ಮತಚಲಾಯಿಸಿದರು.
ಲೋಕಸಭೆ ಚುನಾವಣೆ LIVE:ಪ.ಬಂಗಾಳದಲ್ಲಿ ಚುನಾವಣೆ ಗಲಭೆ, ಅಶ್ರುವಾಯು ಪ್ರಯೋಗ
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಅವರ ಪತಿ ಕೇಂದ್ರದ ಮಾಜಿ ಸಚಿವ ದಿ.ಅನಂತ ಕುಮಾರ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸತತ ಆರು ಬಾರ ಗೆಲುವು ಸಾಧಿಸಿದ್ದರು. ಅವರು ಅನಾರೋಗ್ಯದ ಕಾರಣ ಅಸುನೀಗಿದ್ದರಿಂದ ಈ ಬಾರಿ ತೇಜಸ್ವಿನಿ ಅವರನ್ನೇ ಈ ಕ್ಷೇತ್ರದಿಂದ ಚುನಾವಣೆ ಕಣಕ್ಕಿಳಿಸಬೇಕೆಂದು ಮೊದಲಿಗೆ ಬಿಜೆಪಿ ವರಿಷ್ಟರು ನಿರ್ಧರಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ತೇಜಸ್ವಿನಿ ಅವರ ಬದಲು ಬಿಜೆಪಿ ಯುವನಾಯಕ ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿ ಟಿಕೆಟ್ ನೀಡಿತು.
ಕರ್ನಾಟಕ ಲೋಕ ಸಮರ LIVE: ಮಧುವಣಗಿತ್ತಿಯರ ಮತ ಸಂಭ್ರಮ
ಕಾಂಗ್ರೆಸ್ ನಿಂದ ಈ ಕ್ಷೇತ್ರದಲ್ಲಿ ಬಿಕೆ ಹರಿಪ್ರಸಾದ್ ಸ್ಪರ್ಧಿಸಿದ್ದಾರೆ. ಗುರುವಾರ ಈ ಕ್ಷೇತ್ರಕ್ಕೆ ಮತದಾನ ನಡೆಯುತ್ತಿದ್ದು, ಮೇ 23 ರಂಡು ಫಲಿತಾಂಶ ಹೊರಬೀಳಲಿದೆ.