AIFO India ವತಿಯಿಂದ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ದಿನಸಿ ಪೊಟ್ಟಣ
ಬೆಂಗಳೂರು, ಏಪ್ರಿಲ್ 6: ಬೆಂಗಳೂರಿನಲ್ಲಿ ಲಾಕ್ಡೌನ್ ನಿಂದ ಸಂಕಷ್ಟಕ್ಕೆ ತುತ್ತಾಗಿರುವ ಕಾರ್ಮಿಕರಿಗೆ, AIFO India ಸಂಸ್ಥೆ ವತಿಯಿಂದ ಅಗತ್ಯ ದಿನಸಿಯನ್ನು ವಿತರಿಸಲಾಯಿತು.
ಬೆಂಗಳೂರಿನ ಕೋಡಿ ಚಿಕ್ಕನಹಳ್ಳಿ ಬಳಿಯ ಲೇಕ್ ವ್ಯೂವ್ ಅಪಾರ್ಟ್ಮೆಂಟ್ ಹತ್ತಿರ ಬೀಡುಬಿಟ್ಟಿರುವ ಕಾರ್ಮಿಕ ಕುಟುಂಬಗಳಿಗೆ ಎಐಎಫ್್ಓ ಇಂಡಿಯಾ ಸಂಸ್ಥೆ ವತಿಯಿಂದ ಸೋಮವಾರ ಆಹಾರ ಪೊಟ್ಟಣಗಳನ್ನು ವಿತರಿಸಲಾಯಿತು.
10 ಸಾವಿರ ಮಾಸ್ಕ್, ಆಹಾರ ಕಿಟ್ ಹಂಚಿದ ಸ್ಯಾನ್ ಸಿಟಿ ತಂಡ
ಲಾಕ್ಡೌನ್ ನಿಂದ ಕಾರ್ಮಿಕರು ಅಗತ್ಯ ವಸ್ತುಗಳು ಇರದೇ ತೊಂದರೆಗೆ ಒಳಗಾಗಿದ್ದಾರೆ. ಇದರಿಂದ ಕಾರ್ಮಿಕರು ದೈನಂದಿನ ಜೀವನ ನಡಿಸುವುದು ಕಷ್ಟವಾಗಿದೆ. ಹೀಗಾಗಿ ಮಾನವೀಯತೆಯಿಂದ ನಾವೆಲ್ಲರೂ ಅಕ್ಕಿ, ಬೇಳೆ, ಎಣ್ಣೆ ಹಾಗೂ ಗೋಧಿ ಹಿಟ್ಟನ್ನು ಒಳಗೊಂಡಿರುವ ಕಿಟ್ ನ್ನು 24 ಕುಟುಂಬಗಳಿಗೆ ವಿತರಿಸಿದ್ದೇವೆ ಎಂದು AIFO Indiaದ ನಿರ್ದೇಶಕ ಜಯಂತ್ ಕುಮಾರ್ ತಿಳಿಸಿದ್ದಾರೆ.
ಈ ಕಾರ್ಯಕ್ಕೆ NTPC ಹಾಗೂ ಲೇಕ್ ವ್ಯೂವ್ ಅಪಾರ್ಟ್ಮೆಂಟ್ ಅಸೋಸಿಯೇಷನ್ ಸಹಕಾರ ನೀಡಿತ್ತು ಎಂದು ಅವರು ತಿಳಿಸಿದ್ದಾರೆ. ಈ ವೇಳೆ AIFOದ ಡಾ. ಜೋಸ್, ಲೇಕ್ ವ್ಯೂವ್ ಅಪಾರ್ಟ್ಮೆಂಟ್ ಅಸೋಸಿಯೇಷನ್ ನ ಎಸ್ ಆರ್ ಶೆಟ್ಟಿ, NTPCಯ ಗುರುವಿಂದರ್ ಕೌರ್ ಅವರು ಹಾಜರಿದ್ದರು.