ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆ.ಎಸ್.ಆರ್.ಟಿ.ಸಿ ಸಂಚಾರ: ಹೊಸ ನಿಯಮಗಳು ಇಂತಿವೆ

|
Google Oneindia Kannada News

ಬೆಂಗಳೂರು: ಮೇ 31 ರವರೆಗೂ ಲಾಕ್ ಡೌನ್ 4.0 ಮುಂದುವರೆಯಲಿದ್ದು, ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿ ಅನ್ವಯ, ಹಲವು ಷರತ್ತುಗಳ ಮೇಲೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಆರಂಭಕ್ಕೆ ಚಿಂತನೆ ನಡೆಸಲಾಗಿದೆ.

''ಕರ್ನಾಟಕದಲ್ಲಿ ಸರ್ಕಾರಿ ಸಾರಿಗೆ ಬಸ್ ಗಳ ಸಂಚಾರ ಪುನರ್ ಪ್ರಾರಂಭದ ಬಗ್ಗೆ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆಗೆ ಚರ್ಚಿಸಿ, ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು'' ಅಂತ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ಕೊರೊನಾ ಲಾಕ್ ಡೌನ್: KSRTC ಇಂದ 2 ಪ್ರಮುಖ ಘೋಷಣೆಕೊರೊನಾ ಲಾಕ್ ಡೌನ್: KSRTC ಇಂದ 2 ಪ್ರಮುಖ ಘೋಷಣೆ

ಸದ್ಯಕ್ಕೆ ಡಿಪೋಗಳಲ್ಲೇ ಬಸ್ ಗಳು ಉಳಿದುಕೊಂಡಿದ್ದು, ಸರ್ಕಾರದಿಂದ ಆದೇಶ ಬರುವವರೆಗೂ ರಸ್ತೆಗೆ ಬಸ್ ಗಳು ಇಳಿಯುವುದಿಲ್ಲ.

ಬಸ್ ನಲ್ಲಿ ಪ್ರಯಾಣ ಮಾಡುವವರಿಗೆ ನಿಯಮಗಳು

ಬಸ್ ನಲ್ಲಿ ಪ್ರಯಾಣ ಮಾಡುವವರಿಗೆ ನಿಯಮಗಳು

* KSRTC ಬಸ್​ನಲ್ಲಿ 20 ರಿಂದ 30 ಪ್ರಯಾಣಿಕರಿಗಷ್ಟೇ ಅವಕಾಶ ಸಾಧ್ಯತೆ.

* ರಾಜಹಂಸ ಬಸ್​ನಲ್ಲಿ 20 ಪ್ರಯಾಣಿಕರಿಗಷ್ಟೇ ಅವಕಾಶ ಸಾಧ್ಯತೆ.

* ಪ್ರಯಾಣಿಕರು ಸಾಮಾಜಿಕ ಅಂತರ ಪಾಲಿಸಲೇಬೇಕು.

* ಡಬಲ್​ ಸೀಟ್ ​ನಲ್ಲಿ ಒಬ್ಬರು, ತ್ರಿಬಲ್ ಸೀಟ್​ನಲ್ಲಿ ಇಬ್ಬರು ಕೂರಲು ಅವಕಾಶ ಸಾಧ್ಯತೆ.

* ಬಸ್​ನಲ್ಲಿ ನಿಂತು ಕೊಂಡು ಪ್ರಯಾಣಿಸಲು ಅವಕಾಶ ಇಲ್ಲ.

* 65 ವರ್ಷ ಮೇಲ್ಪಟ್ಟವರು, ಗರ್ಭಿಣಿ, ಮಕ್ಕಳಿಗೆ ಬಸ್ ಪ್ರಯಾಣಕ್ಕೆ ನಿರ್ಬಂಧ

ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳಿಗೆ ನಿಯಮಗಳು

ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳಿಗೆ ನಿಯಮಗಳು

* ಕಂಡಕ್ಟರ್, ಡ್ರೈವರ್, ಪ್ರಯಾಣಿಕರು ಮಾಸ್ಕ್ ಕಡ್ಡಾಯವಾಗಿ ಧರಿಸಿರಲೇಬೇಕು.

* ಮುಖ್ಯ ನಿಲ್ದಾಣಗಳಲ್ಲಷ್ಟೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು.

* ಮಾರ್ಗ ಮಧ್ಯೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲೇಬಾರದು.

* ಮುಂದಿನ ಸ್ಟಾಪ್​ನಲ್ಲಿ ಎಷ್ಟು ಪ್ರಯಾಣಿಕರು ಇಳಿತಾರೋ ಅಷ್ಟು ಜನರನ್ನೇ ಹತ್ತಿಸಿಕೊಳ್ಳಬೇಕು.

* ಪ್ರಯಾಣಿಕರ ವಿವರ, ವಿಳಾಸ, ಮೊಬೈಲ್ ನಂಬರ್ ಪಡೆಯಬೇಕು.

* ಪ್ರಯಾಣಿಕರು ಅನಾರೋಗ್ಯದಿಂದ ಬಳಲುತ್ತಿದ್ದರೆ, ತಕ್ಷಣವೇ ಅಧಿಕಾರಿಗಳ ಗಮನಕ್ಕೆ ತರಬೇಕು.

ಮೆಜೆಸ್ಟಿಕ್ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಖಾಲಿ ಖಾಲಿ

ಮೆಜೆಸ್ಟಿಕ್ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಖಾಲಿ ಖಾಲಿ

ಬಸ್ ಸಂಚಾರ ಇಲ್ಲದ ಕಾರಣ ಇಂದು ಮೆಜೆಸ್ಟಿಕ್ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಖಾಲಿ ಖಾಲಿಯಾಗಿ ಕಂಡುಬಂತು.

ಗುಜರಿ ಸೇರಲಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಗಳಿಗೆ 'ಸ್ತ್ರೀ' ಭಾಗ್ಯ! ಗುಜರಿ ಸೇರಲಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಗಳಿಗೆ 'ಸ್ತ್ರೀ' ಭಾಗ್ಯ!

ಕೆ.ಎಸ್.ಆರ್.ಟಿ.ಸಿ ಕಡೆಯಿಂದ ಬಸ್ ಆರಂಭಕ್ಕೆ ಸಿದ್ಧತೆ

ಕೆ.ಎಸ್.ಆರ್.ಟಿ.ಸಿ ಕಡೆಯಿಂದ ಬಸ್ ಆರಂಭಕ್ಕೆ ಸಿದ್ಧತೆ

ಇವತ್ತು ಸಿಎಂ ಸಭೆ‌ ಬಳಿಕ ಬಸ್ ಕಾರ್ಯಾಚರಣೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಸಭೆಯಲ್ಲಿ ಬಸ್ ಸಂಚಾರ ಆರಂಭಿಸುವ ಬಗ್ಗೆ ತೀರ್ಮಾನಿಸಲಾಗುತ್ತದೆ. ಅನುಮತಿ ಸಿಕ್ಕ ಬಳಿಕವಷ್ಟೇ ಬಸ್ ಸಂಚಾರ ಆರಂಭವಾಗಲಿದ್ದು, ಮೆಜೆಸ್ಟಿಕ್ ನಲ್ಲಿ ಸಾಮಾಜಿಕ‌ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ.

English summary
Coronavirus Lockdown: New rules For KSRTC Staff.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X