ಲಾಕ್ಡೌನ್ ಲಂಚ: ಇಬ್ಬರು ಇನ್ಸಪೆಕ್ಟರ್ಗಳ ಅಮಾನತು
ಬೆಂಗಳೂರು, ಮೇ 9: ಲಾಕ್ಡೌನ್ ಸಮಯದಲ್ಲಿ ಸಿಗರೇಟ್ ಡೀಲರ್ಸ್ಗಳಿಂದ ಲಂಚ ಸ್ವೀಕರಿಸಿದ್ದಾರೆ ಎಂಬ ಆರೋಪದ ಮೇಲೆ ಇಬ್ಬರು ಬೆಂಗಳೂರು ಸಿಸಿಬಿ ಪೊಲೀಸ್ ಅಧಿಕಾರಿಗಳನ್ನು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅಮಾನತು ಮಾಡಿ ಇಂದು ಆದೇಶ ಹೊರಡಿಸಿದ್ದಾರೆ.
Recommended Video
ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ಗಳಾದ ನಿರಂಜನಕುಮಾರ್ ಹಾಗೂ ಅಜಯ್ ಎನ್ನುವರು ಅಮಾನತುಗೊಂಡ ಅಧಿಕಾರಿಗಳಾಗಿದ್ದಾರೆ.
ಲಾಕ್ಡೌನ್
ಸಂದರ್ಭದಲ್ಲಿ
ಸಿಗರೇಟ್
ವಿತರಕ
ಕಂಪೆನಿಗಳಿಂದ
ಸಿಗರೇಟ್
ವಿತರಣೆ
ಮಾಡಲು
ಅನುಕೂಲ
ಮಾಡಿಕೊಡುವ
ನಿಟ್ಟಿನಲ್ಲಿ
ಎಸಿಪಿ
ಪ್ರಭುಶಂಕರ್
ಹಾಗೂ
ಇತರ
ಪೊಲೀಸ್
ಅಧಿಕಾರಿಗಳು
60
ಲಕ್ಷ
ರುಪಾಯಿಗೂ
ಅಧಿಕ
ಲಂಚ
ಸ್ವೀಕರಿಸಿದ್ದಾರೆ
ಎನ್ನುವ
ಆರೋಪಗಳು
ಕೇಳಿ
ಬಂದಿದ್ದವು.
ಪ್ರಕರಣವನ್ನು
ಗಂಭೀರವಾಗಿ
ಪರಿಗಣಿಸಿದ
ಭಾಸ್ಕರ್
ರಾವ್
ಅವರು
ಸಿಸಿಬಿ
ಡಿಸಿಪಿ
ರವಿಕುಮಾರ್
ಅವರಿಗೆ
ತನಿಖೆ
ನಡೆಸಲು
ಸೂಚಿಸಿದ್ದರು.
ರವಿಕುಮಾರ್ ವರದಿಯಲ್ಲಿ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಪ್ರಭುಶಂಕರ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಪ್ರಭುಶಂಕರ್ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಇದರ ಬೆನ್ನಲ್ಲೇ ಇಬ್ಬರು ಪೊಲೀಸ್ ಇನ್ಸಪೆಕ್ಟರ್ಗಳನ್ನು ಅಮಾನತು ಮಾಡಲಾಗಿದೆ