ಅನ್ವಾರ್ ಮಾಣಿಪ್ಪಾಡಿಗೆ ಮಾಜಿ ಸಚಿವರಿಂದ ಜೀವ ಬೆದರಿಕೆ
ಬೆಂಗಳೂರು, ಜೂನ್ 2 : ವಕ್ಫ್ ಮಂಡಳಿ ಆಸ್ತಿ ದುರ್ಬಳಕೆ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿರುವುದರಿಂದ ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್ ಮತ್ತು ಸಚಿವ ಕಮರುಲ್ ಇಸ್ಲಾಂ ಬೆಂಬಲಿಗರು ತಮಗೆ ತಮಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಅಲ್ಪ ಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ದೂರಿದ್ದಾರೆ.
ಬೆಂಗಳೂರಿನಲ್ಲಿ
ಸೋಮವಾರ
ಮಾತನಾಡಿವ
ಅನ್ವರ್
ಮಾಣಿಪ್ಪಾಡಿ,
ತಾವು
ಅಲ್ಪಸಂಖ್ಯಾತ
ಆಯೋಗದ
ಅಧ್ಯಕ್ಷರಾಗಿದ್ದ
ಸಂದರ್ಭದಲ್ಲಿ
ವಕ್ಫ್
ಆಸ್ತಿ
ಕಬಳಿಕೆಯಾಗಿರುವ
ಬಗ್ಗೆ
ಸರ್ಕಾರಕ್ಕೆ
ವರದಿ
ನೀಡಿದ್ದೆ.
ಈ
ವರದಿಯಲ್ಲಿ
ಮಾಜಿ
ಕೇಂದ್ರ
ಸಚಿವ
ರೆಹಮಾನ್
ಖಾನ್
ವಿರುದ್ಧವೂ
ಆರೋಪ
ಕೇಳಿ
ಬಂದಿತ್ತು
ಎಂದು
ಹೇಳಿದರು.
ರೆಹಮಾನ್ ಖಾನ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ವಕ್ಫ್ ಖಾತೆ ಸಚಿವ ಖಮರುಲ್ ಇಸ್ಲಾಂ ಬೆಂಬಲಿಗರು ತಮಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಾಣಿಪ್ಪಾಡಿ ಆರೋಪಿಸಿದರು. ಈ ಕುರಿತು ಸರ್ಕಾರಕ್ಕೆ ಪತ್ರ ಬರೆದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಾಣಿಪ್ಪಾಡಿ ದೂರಿದರು. [ಮಾಣಿಪ್ಪಾಡಿ ನೀಡಿದ ವರದಿಯಲ್ಲೇನಿದೆ?]
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಕ್ಫ್ ಆಸ್ತಿ ಕಬಳಿಕೆ ಕುರಿತ ವರದಿಯನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಸರ್ಕಾರ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಣಿಪ್ಪಾಡಿ ಒತ್ತಾಯಿಸಿದರು. [ಜೈಲಿನಲ್ಲಿರಬೇಕಾಗಿದ್ದವ ಸಚಿವನಾದುದು ಎಷ್ಟುಸರಿ?]
ಪ್ರಧಾನಿಗೆ ಪತ್ರ ಬರೆಯುವೆ : ವಕ್ಫ್ ಆಸ್ತಿ ದುರ್ಬಳಕೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲ, ಈ ವಿಷಯದ ಕುರಿತು ಬರೆದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ ಎಂದು ಮಾಣಿಪ್ಪಾಡಿ ತಿಳಿಸಿದರು.