ಯಾರಿಗೆ ಟಿಕೆಟ್ ಕೊಡುತ್ತಾರೆಂದು ಹೇಳಲು ಆಗುವುದಿಲ್ಲ: ರೇಣುಕಾಚಾರ್ಯ
ಬೆಂಗಳೂರು, ಜೂ. 19: ಮೈತ್ರಿನ ಸರ್ಕಾರದ ಪತನಕ್ಕೆ ಹಗಲು ರಾತ್ರಿ ಶ್ರಮಿಸಿದ್ದವರ ರಾಜಕೀಯ ಸ್ಥಿತಿ ಇದೀಗ ಅತಂತ್ರವಾಗಿದೆ. ಸರ್ಕಾರ ಪತನದ ಬಳಿಕ ನಡೆದ ಉಪ ಚುನಾವಣೆಯಲ್ಲಿ ಸೋಲುಂಡ ಬಳಿಕ ವಿಧಾನ ಪರಿಷತ್ ಪ್ರವೇಶಿಸಿ ಮಂತ್ರಿಯಾಗುವ ಆಸೆಯನ್ನು ಅನೇಕರು ಇಟ್ಟುಕೊಂಡಿದ್ದ ಮಾಜಿ ಸಚಿವ ಎಚ್. ವಿಶ್ವನಾಥ್ ರಾಜಕೀಯ ಭವಿಷ್ಯವೇ ಮುಸುಕಾಗಿದೆ.
Recommended Video
ಇದೇ ಸಂದರ್ಭದಲ್ಲಿ ಸಿಎಂ ರಾಜಕೀಯನ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರ ಹೇಳಿಕೆ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಹೆಚ್. ವಿಶ್ವನಾಥ್ ಅವರಿಗೆ ಮೇಲ್ಮನೆ ಟಿಕೆಟ್ ಕೈತಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಎಂ.ಪಿ. ರೇಣುಕಾಚಾರ್ಯ ಕೊಟ್ಟಿರುವ ಹೇಳಿಕೆ ವಿಶ್ವನಾಥ್ ಅವರನ್ನು ಮತ್ತಷ್ಟು ಚಿಂತನೆ ದೂಡುವಂತೆ ಮಾಡಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ಕೊಟ್ಟಿರುವ ರೇಣುಕಾಚಾರ್ಯ, ನಮ್ಮ ವರಿಷ್ಠರು ಇದ್ದಾರೆ, ತೀರ್ಮಾನ ಮಾಡುತ್ತಾರೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಎಂದಿದ್ದಾರೆ.
ಜೊತೆಗೆ ಯಾರಿಗೆ ಕೊಡುತ್ತಾರೆ? ಯಾರಿಗೆ ಸಿಗಲ್ಲ ನಾನು ಹೇಳುವುದಕ್ಕೆ ಆಗುವುದಿಲ್ಲ. ಅದನ್ನು ನಮ್ಮ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡ್ತಾರೆ ಎಂದು ಬೆಂಗಳೂರಿನಲ್ಲಿ ಎಂ.ಪಿ. ರೇಣುಕಾಚಾರ್ಯ ಹೇಳಿಕೆ ಕೊಟ್ಟಿದ್ದಾರೆ.