ಮಾ.8ಕ್ಕೆ ಗಿರೀಶ್ ಕಾಸರವಳ್ಳಿ ಅವರಿಂದ "ಕಾಲ; ಕಾಲಕ್ಷೇಪ" ಉಪನ್ಯಾಸ
ಬೆಂಗಳೂರು, ಮಾರ್ಚ್ : "ದೇವಗೀತಂ ಚಾರಿಟಬಲ್ ಟ್ರಸ್ಟ್" ಮತ್ತು "ಅಭಿಜ್ಞಾನ" ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಪ್ರಖ್ಯಾತ ಹಿಂದಿ ಪತ್ರಕರ್ತ ನಾರಾಯಣ ದತ್ತ ಸ್ಮಾರಕ ಉಪನ್ಯಾಸ-5ರ ಕಾರ್ಯಕ್ರಮದಲ್ಲಿ "ಕಾಲ: ಕಾಲಕ್ಷೇಪ" ವಿಷಯದ ಕುರಿತು ಉಪನ್ಯಾಸ ನಡೆಯಲಿದೆ.
ವಿಜ್ಞಾನ ಪ್ರಿಯರಿಗೆ ಸಿಹಿ ಸುದ್ದಿ ನೀಡಿದ ನೆಹರು ತಾರಾಲಯ
ಕಾಲ ಮತ್ತು ದೇಶ- ಇವೆರಡೂ ಕಲೆಯ ಎರಡು ಕೊರಳುಗಳು. ಇವೆರಡರ ಸಫಲ ಸಾಂಗತ್ಯದಲ್ಲಿಯೇ ಸಿನಿಮಾ ಕೂಡ ಕಲೆಯಾಗಿ ಅರಳುವಂಥದ್ದು. ಆದರೆ ಸಿನಿಮಾದಲ್ಲಿ ಕಾಲದ ನಿರ್ವಹಣೆ ಸವಾಲಿನ ಹೊಣೆಗಾರಿಕೆ ಕೂಡ. ಸಿನಿಮಾಗೂ ಕಾಲತತ್ವಕ್ಕೂ ಇರುವ ಹಲವು ಆಯಾಮಗಳ ಅವಲೋಕನ ಈ "ಕಾಲ:ಕಾಲಕ್ಷೇಪ" ಉಪನ್ಯಾಸವಾಗಿದೆ.
ಚಲನಚಿತ್ರ ನಿರ್ದೇಶಕ ಗಿರೀಶ ಕಾಸರವಳ್ಳಿ ಉಪನ್ಯಾಸ ನೀಡಲಿದ್ದಾರೆ. ಅಭಯ ಸಿಂಹ, ಮನು ಚಕ್ರವರ್ತಿ, ಎನ್. ವಿದ್ಯಾಶಂಕರ್, ಪಿ.ಶೇಷಾದ್ರಿ ಅವರು ಭಾಗವಹಿಸಲಿದ್ದರೆ.
ಇದೇ
ಮಾರ್ಚ್
8,
ಭಾನುವಾರ
ಬೆಳಿಗ್ಗೆ
10.30ರಿಂದ
ಉಪನ್ಯಾಸ
ಕಾರ್ಯಕ್ರಮ
ಆರಂಭಗೊಳ್ಳಲಿದೆ.
ಸ್ಥಳ:
ದಿ
ಮಿಥಿಕ್
ಸೊಸೈಟಿ,
14/3,
ನೃಪತುಂಗ
ರಸ್ತೆ,
ಬೆಂಗಳೂರು-01.