ಅಂಬರೀಶ್ ಅಂತ್ಯಕ್ರಿಯೆಗೆ ಕ್ಷಣಗಣನೆ: ವಿಧಿ ವಿಧಾನಗಳೇನು?
Recommended Video
ಬೆಂಗಳೂರು, ನವೆಂಬರ್ 26: ನಟ, ಕೇಂದ್ರದ ಮಾಜಿ ಸಚಿವ ಅಂಬರೀಶ್(66) ಅವರ ಅಂತ್ಯಕ್ರಿಯೆಗೆ ಕಂಠೀರವ ಸ್ಟುಡಿಯೋದಲ್ಲಿ ಸಕಲ ಸಿದ್ಧತೆ ನಡೆದಿದೆ.
ಅಂಬಿಯಂತೆ ಮಾನವೀಯತೆ ಮೆರೆದ ಪುತ್ರ ಅಭಿಷೇಕ್
10 ಕೆಜಿ ತುಪ್ಪ, 250 ಕೆಜಿ ಗಂಧದ ಕಟ್ಟಿಗೆ ತರಲಾಗಿದ್ದು, ಹಾಲು, ಮೊಸರು, ಪಂಚಗವ್ಯ ಬಳಕೆ ಮಾಡಲಾಗುತ್ತಿದೆ. ಹೂವಿನ ಅಲಂಕಾರ ಹಾಗೂ ಪಾರ್ಥಿವ ಶರೀರದ ಬಾಯಲ್ಲಿ ಚಿನ್ನದ ನಾಣ್ಯ ಇಡಲಾಗುತ್ತದೆ .
In Pics : 'ದಿಗ್ಗಜ'ನನ್ನು ಕಳೆದುಕೊಂಡು ಕಂಬನಿ ಮಿಡಿಯುತ್ತಿರುವ ಚಿತ್ರರಂಗ
ಹುಣಸೆ, ಅತ್ತಿ, ನೀಲಗಿರಿ, ಸರ್ವೆ ಕಟ್ಟಿಗೆಗಳನ್ನೂ ತರಲಾಗಿದೆ. ಅಂತ್ಯಕ್ರಿಯೆ ಸ್ಥಳದಲ್ಲಿ ನಾಲ್ಕು ಹಂತದಲ್ಲಿ ಚಿತೆಗೆ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಸಿದ್ಧತೆ ಪೂರ್ಣಗೊಂಡಿದೆ. 30 ಕೆಜಿ ಕರ್ಪೂರ ಬಳಕೆ ಮಾಡಲಾಗುತ್ತಿದೆ. ಯಾವುದೇ ಸಂಪ್ರದಾಯದಂತೆ ಅಂಬಿ ಅಂತ್ಯಕ್ರಿಯೆ ನಡೆಯುವುದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಒಂದೇ ತಿಂಗಳಿನಲ್ಲಿ ವಿಧಿಯ ಕರೆಗೆ ಓಗೊಟ್ಟ ಆಪ್ತ ಸ್ನೇಹಿತರು!
ಪಂಚಭೂತಗಳಲ್ಲಿ ಲೀನವಾಗುವಂತೆ ಅಂತಿಮ ವಿಧಿವಿಧಾನಗಳನ್ನು ಪೂರೈಸಲಾಗುತ್ತಿದೆ. ಒಕ್ಕಲಿಗ ಸಂಪ್ರದಾಯದಂತೆ ವಿಧಿವಿಧಾನ ಪೂರೈಸಬೇಕಿತ್ತು ಆದರೆ ಶ್ರೀರಂಗಪಟ್ಟಣದ ಪುರೋಹಿತ ಭಾನುಪ್ರಕಾಶ್ ಅವರು ಸುಮಲತಾ ಹಾಗೂ ಅಭಿಷೇಕ್ ಅವರನ್ನು ಮನವಿ ಮಾಡಿಕೊಂಡು ಪಂಚಭೂತಗಳಲ್ಲಿ ಲೀನವಾಗುವಂತೆ ಮಾಡಲು ಸಿದ್ಧತೆ ನಡೆಸಿದ್ದಾರೆ.