ಕ್ಯಾರ್ ಚಂಡಮಾರುತ ಪ್ರಭಾವ, ಬೆಂಗಳೂರಲ್ಲೂ ಶುರುವಾಯ್ತು ಮಳೆ
ಬೆಂಗಳೂರು, ಅಕ್ಟೋಬರ್ 25: ಕ್ಯಾರ್ ಚಂಡಮಾರುತ ಪ್ರಭಾವ ಬೆಂಗಳೂರಲ್ಲೂ ಭಾರಿ ಮಳೆ ಶುರುವಾಗಿದೆ.
ಜಯನಗರ, ಬನಶಂಕರಿ, ವಿಧಾನಸೌಧ, ಮಲ್ಲೇಶ್ವರ, ಕೆಂಗೇರಿ, ಉತ್ತರ ಹಳ್ಳಿ, ಮೈಸೂರು ರಸ್ತೆ, ಯಲಹಂಕ , ಹೆಬ್ಬಾಳ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ. ಇಂದು ಸಂಜೆಯೂ ಕೂಡ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕ್ಯಾರ್ ಚಂಡಮಾರುತ; ಅಸ್ತವ್ಯಸ್ತಗೊಂಡ ಮಂಗಳೂರು, ಉಡುಪಿ
ಕಳೆದ ಮೂರ್ನಾಲ್ಕು ದಿನಗಳಿಂದ ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಚಂಡ ಮಾರುತವಾಗಿ ಪರಿವರ್ತನೆಗೊಂಡಿದ್ದು, ಗೋವಾ, ಮಹಾರಾಷ್ಟ್ರ, ಕರ್ನಾಟಕದ ಕರಾವಳಿ ಭಾಗದಲ್ಲಿ ಹೆಚ್ಚು ಮಳೆ ಬರುತ್ತಿದೆ.
ಜೊತೆಗೆ
ಕಡಲ
ತೀರದಲ್ಲಿ
ಗಂಟೆಗೆ
45-60
ಕಿ.ಮೀ
ವೇಗದಲ್ಲಿ
ಗಾಳಿ
ಬೀಸುತ್ತಿರುವುದರಿಂದ
ಮೀನುಗಾರರಿಗೆ
ಸಮುದ್ರದ
ಬಳಿ
ಬಾರದಂತೆ
ಎಚ್ಚರಿಕೆ
ನೀಡಲಾಗಿದೆ.
ಕರಾವಳಿ
ಹೊರತುಪಡಿಸಿದರೆ
ಘಟ್ಟ
ಪ್ರದೇಶದ
ಜಿಲ್ಲೆಗಳಲ್ಲಿ
ಹೆಚ್ಚು
ಮಳೆಯಾಗುವ
ಸಾಧ್ಯತೆ
ಇದೆ.
ಉಡುಪಿ , ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಅ. 25 ಹಾಗೂ 26 ಎರಡು ದಿನ 115ರಿಂದ 205 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಮುಂದಿನ 48 ಗಂಟೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.