ಕಾಂಗ್ರೆಸ್ ಶಾಸಕ ಸುಧಾಕರ್ಗೆ ಕೈಕೊಟ್ಟ ಕುಮಾರಸ್ವಾಮಿ
Recommended Video
ಬೆಂಗಳೂರು, ಮಾರ್ಚ್ 06: ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಸುಧಾಕರ್ ಅವರಿಗೆ ನೀಡಲಾಗಿದ್ದ ನಿಗಮ ಮಂಡಳಿ ಸ್ಥಾನವನ್ನು ಕುಮಾರಸ್ವಾಮಿ ರದ್ದು ಮಾಡಿದ್ದು, ಆ ಸ್ಥಾನವನ್ನು ಜಯರಾಮ್ ಅವರಿಗೆ ನೀಡಿದ್ದಾರೆ.
ಶಾಸಕ ಸುಧಾಕರ್ ಅವರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು. ನೇಮಕ ಮಾಡಿದ ಮೂರು ತಿಂಗಳ ಒಳಗಾಗಿ ಅವರಿಂದ ಆ ಸ್ಥಾನವನ್ನು ಕಿತ್ತುಕೊಳ್ಳಲಾಗಿದೆ.
ಚಿಕ್ಕಬಳ್ಳಾಪುರಕ್ಕೆ ಅಚ್ಚರಿಯ ಅಭ್ಯರ್ಥಿ ಶಿಫಾರಸು ಮಾಡಿದ ಜೆಡಿಎಸ್!
ಸುಧಾಕರ್ ಅವರಿಗೆ ನಿಗಮ ಮಂಡಳಿ ಸ್ಥಾನ ನೀಡಬೇಕಾದರೂ ಸಹ ಕುಮಾರಸ್ವಾಮಿ ಅವರು ಮೀನಾ-ಮೇಷ ಎಣಿಸಿದ್ದರು. ಕಾಂಗ್ರೆಸ್ ನೀಡಿದ್ದ ಪಟ್ಟಿಯಲ್ಲಿ ಸುಧಾಕರ್ ಸೇರಿ ಇನ್ನೆರಡು ಶಾಸಕರಿಗೆ ನಿಗಮ ಮಂಡಳಿ ಸ್ಥಾನವನ್ನು ಕೊಟ್ಟಿರಲಿಲ್ಲ. ಆದರೆ ಒತ್ತಡಕ್ಕೆ ಮಣಿದು ನಿಧಾನವಾಗಿ ಸ್ಥಾನ ನೀಡಲಾಯಿತು. ಆದರೆ ಈಗ ಮರಳಿ ಪಡೆಯಲಾಗಿದೆ.
ಯಶವಂತಪುರ-ಚಿಕ್ಕಬಳ್ಳಾಪುರ-ದೆಹಲಿ ಹೊಸ ರೈಲಿಗೆ ಹಸಿರು ಬಾವುಟ
ಮೈತ್ರಿ ಸರ್ಕಾರ ಆದಾಗಿನಿಂದಲೂ ಸುಧಾಕರ್ ಅವರು ಕುಮಾರಸ್ವಾಮಿ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಅಪ್ಪಟ ಬೆಂಬಲಿಗರಾಗಿರುವ ಸುಧಾಕರ್ ಅವರ ಈ ನಡೆಯ ಬಗ್ಗೆ ಕುಮಾರಸ್ವಾಮಿ ಅಸಮಾಧಾನ ಹೊಂದಿದ್ದರು.