ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಪುನೀತ ಯಾತ್ರೆ
ಬೆಂಗಳೂರು, ನವೆಂಬರ್ 28 : ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ರಾಜ್ಯದ ಹೊರರಾಜ್ಯದ ಜನತೆಯು ತಮ್ಮ ತಮ್ಮ ಧರ್ಮದ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಪುನೀತ ಯಾತ್ರೆ ಎಂಬ ರಿಯಾಯಿತಿ ದರದ ಪ್ರವಾಸ ಪ್ಯಾಕೇಜನ್ನು ಆಯೋಜಿಸಲಾಗುತ್ತಿದೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪ್ರವಾಸವೀಗ ಪ್ರಯಾಸ!
ಈ ಪ್ರವಾಸಗಳನ್ನು ನಿಗಮದ ಇಲ್ಲವೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಯಿಂದ ಪಡೆದ ಸುಸಜ್ಜಿತ ಎಸಿ ಬಸ್ಸುಗಳಲ್ಲಿ ನಿಯೋಜಿಸಲಾಗುತ್ತಿದೆ. ಈ ಪ್ರವಾಸಗಳಲ್ಲಿ ರಾಜ್ಯದ ಹಾಗೂ ಹೊರರಾಜ್ಯದ ಅತ್ಯಂತ ಪವಿತ್ರವಾದ ದೇವಸ್ಥಾನಗಳು, ಚರ್ಚುಗಳು, ಮಸೀದಿ ಇತ್ಯಾದಿಗಳನ್ನು ದರ್ಶಿಸಬಹುದಾಗಿದೆ. ಅಲ್ಲದೇ ಈ ಸ್ಥಳಗಳ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿಯ ಪರಿಚಯವನ್ನು ಪ್ರವಾಸಿಗರು ಮಾಡಿಕೊಳ್ಳಬಹುದಾಗಿದೆ.
ನಿರ್ವಹಣೆಯಿಲ್ಲದೆ ಸೊರಗುತ್ತಿವೆ ಮಡಿಕೇರಿಯ ಪ್ರವಾಸಿ ತಾಣಗಳು
ಧಾರ್ಮಿಕ ಸ್ಥಳಗಳು: ತಿರುಪತಿ ಬಾಲಾಜಿ ದರ್ಶನ, ಕಾಳಹಸ್ತಿ, ಶಿರಡಿ ಸಾಯಿಬಾಬಾ, ಬೇಲೂರು-ಹಳೇಬೀಡು-ಶ್ರವಣಬೆಳಗೊಳ, ಕುಂದಾದ್ರಿ ಬೆಟ್ಟ, ಮಂತ್ರಾಲಯ, ಹಂಪಿ, ಮಲೆಮಹದೇಶ್ವರ, ನಂಜನಗೂಡು, ಎಡೆಯೂರು, ಆದಿಚುಂಚನಗಿರಿ, ಸಿಗಂಧೂರ, ಗೋಕರ್ಣ, ಪಂಚ ಜ್ಯೋತಿರ್ಲಿಂಗಗಳ ದರ್ಶನ, ಅಜಂತಾ, ಎಲ್ಲೋರ, ಔರಂಗಾಬಾದ್, ಬಾಬಾಬುಡನಗಿರಿ, ಕೂಡಲಸಂಗಮ, ಬಸವನಬಾಗೇವಾಡಿ, ಬಸವಕಲ್ಯಾಣ, ಗಾಣಗಾಪುರ, ಸನ್ನತಿ ಸೌದತ್ತಿ-ಎಲ್ಲಮ್ಮ, ಕೊಲ್ಲಾಪುರ-ಲಕ್ಷ್ಮಿ ದರ್ಶನ, ಅಯ್ಯಪ್ಪಸ್ವಾಮಿ ದರ್ಶನ, ಮಧುರೈ ಮೀನಾಕ್ಷಿ ದರ್ಶನ, ಗುರುವಾಯೂರು, ಫಳನಿ ಮುಂತಾದ ಧಾರ್ಮಿಕ ಪ್ರವಾಸಗಳನ್ನು ಶೇ.25 ರಷ್ಟು ರಿಯಾಯ್ತಿ ದರದಲ್ಲಿ ಆಚರಣೆ ಮಾಡುತ್ತಿರುವುದರಿಂದ, ಪ್ರವಾಸಿಗಳು ಈ ಮೇಲಿನ ಸ್ಥಳಗಳಿಗೆ ಪ್ರವಾಸಗಳನ್ನು ಕೈಗೊಂಡು ಇದರ ಸದುಪಯೋಗ ಪಡೆದುಕೊಳ್ಳಬಹುದು.