ಬೆಂಗಳೂರು-ತಿರುಪತಿ ಪ್ಯಾಕೇಜ್ ಘೋಷಣೆ ಮಾಡಿದ ಕೆಎಸ್ಆರ್ಟಿಸಿ
ಬೆಂಗಳೂರು, ಜನವರಿ 05: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬೆಂಗಳೂರು-ತಿರುಪತಿ ಮಾರ್ಗದ ಪ್ಯಾಕೇಜ್ ಟೂರ್ ಘೋಷಣೆ ಮಾಡಿದೆ. ಜನವರಿ 7ರಿಂದ ಪ್ಯಾಕೇಜ್ ಟೂರ್ ಆರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ಕೆಎಸ್ಆರ್ಟಿಸಿ ಹೇಳಿದೆ.
ಕೆಎಸ್ಆರ್ಟಿಸಿಯ ಬೆಂಗಳೂರು ಕೇಂದ್ರಿಯ ವಿಭಾಗದ ವತಿಯಿಂದ ಬೆಂಗಳೂರು-ತಿರುಪತಿ ಪ್ಯಾಕೇಜ್ ಟೂರ್ ಕೈಗೊಳ್ಳಲಾಗುತ್ತದೆ. ಈ ಪ್ಯಾಕೇಜ್ನಲ್ಲಿ ಜನರು ಸ್ಕ್ಯಾನಿಯಾ ಮಲ್ಟಿಆಕ್ಸಲ್ ವಾಹನದಲ್ಲಿ ಸಂಚಾರ ನಡೆಸಬಹುದಾಗಿದೆ.
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮತ್ತೆ ಹಿರಿಯರು, ಮಕ್ಕಳಿಗೂ ಅವಕಾಶ
ಬೆಂಗಳೂರು-ತಿರುಪತಿ ಟೂರ್ ವಯಾ ಶಾಂತಿನಗರ, ಜಯನಗರ 4ನೇ ಬ್ಲಾಕ್, ನಾಗಸಂದ್ರ, ಎನ್. ಆರ್. ಕಾಲೋನಿ, ಕೆಂಪೇಗೌಡ ಬಸ್ ನಿಲ್ದಾಣ, ದೊಮ್ಮಲೂರು, ಮಾರತ್ಹಳ್ಳಿ, ಐ. ಟಿ. ಐ. ಗೇಟ್, ಕೆ. ಆರ್. ಪುರಂ, ಹೊಸಕೋಟೆ ಮಾರ್ಗವಾಗಿ ಸಂಚಾರ ನಡೆಸಲಿದೆ.
ತಿರುಪತಿ ಲಡ್ಡು ಮಾರುತ್ತಿದ್ದ ನಕಲಿ ವೆಬ್ಸೈಟ್ ವಿರುದ್ಧ ದೂರು
ಭಾನುವಾರದಿಂದ ಗುರುವಾರದ ತನಕ ವಯಸ್ಕರಿಗೆ 2,200 + ಜಿಎಸ್ಟಿ, ಮಕ್ಕಳು (6 ರಿಂದ 12) 1800 ರೂ. + ಜಿಎಸ್ಟಿ ದರವನ್ನು ನಿಗದಿ ಮಾಡಲಾಗಿದೆ. ಶುಕ್ರವಾರ ಮತ್ತು ಶನಿವಾರ ಹೊರಡುವ ಬಸ್ಗಳಲ್ಲಿ ಪ್ಯಾಕೇಜ್ ದರ 2600 ರೂ. + ಜಿಎಸ್ಟಿ, ಮಕ್ಕಳು 2000 ರೂ. + ಜಿಎಸ್ಟಿ.
ಬೆಂಗಳೂರು-ಶಿರಡಿ ಕೆಎಸ್ಆರ್ಟಿಸಿ ಬಸ್ ಸೇವೆ ಆರಂಭ
Recommended Video
ಬಸ್ ಹೊರಡುವ ಸಮಯ, ಪ್ಯಾಕೇಜ್ ವಿವರಗಳು ಇಲ್ಲಿವೆ
— KSRTC (@KSRTC_Journeys) January 5, 2021