ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸಕ ಹರತಾಳು ಹಾಲಪ್ಪ ಪ್ರತಿಭಟನೆಯಿಂದ ಎಚ್ಚೆತ್ತ ಕೆಪಿಎಲ್‌ಸಿ

|
Google Oneindia Kannada News

ಬೆಂಗಳೂರು, ನವೆಂಬರ್ 15: ಬಿಜೆಪಿ ಶಾಸಕ ಹರತಾಳು ಹಾಲಪ್ಪ ಅವರು ಇಂದು ನಡೆಸಿದ ಪ್ರತಿಭಟನೆಯಿಂದ ಕೂಡಲೇ ಎಚ್ಚೆತ್ತ ಕೆಪಿಎಲ್‌ಸಿ (ಕರ್ನಾಟಕ ಸಾರ್ವಜನಿಕ ಭೂ ನಿಗಮ) ಹಾಲಪ್ಪ ಅವರ ಆಗ್ರಹಕ್ಕೆ ಶೀಘ್ರ ಪ್ರತಿಕ್ರಿಯೆ ನೀಡಿದೆ.

ಸಿಗಂದೂರು ಸೇತುವೆಗಾಗಿ ಹಠಾತ್ ಹರತಾಳ ನಡೆಸಿದ ಶಾಸಕ ಹರತಾಳು ಹಾಲಪ್ಪ ಸಿಗಂದೂರು ಸೇತುವೆಗಾಗಿ ಹಠಾತ್ ಹರತಾಳ ನಡೆಸಿದ ಶಾಸಕ ಹರತಾಳು ಹಾಲಪ್ಪ

ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಸಿಗಂದೂರು ಸೇತುವೆ ನಿರ್ಮಾಣದ ಕುರಿತು ಕರ್ನಾಟಕ ವಿದ್ಯುತ್ ನಿರಪೇಕ್ಷಣಾ ಪತ್ರ ನೀಡುವಲ್ಲಿ ಅನುಸರಿಸುತ್ತಿರುವ ವಿಳಂಬ ನೀತಿ ವಿರುದ್ಧ ಪ್ರತಿಭಟನೆ ಮಾಡಿದ್ದರು.

ನಗರದ ಶಕ್ತಿಸೌಧದ ವಿರುದ್ಧ ಹಾಲಪ್ಪ ಮಾಡಿದ ಒಂಟಿ ಪ್ರತಿಭಟನೆಗೆ ಹೆದರಿದ ಕೆಪಿಎಲ್‌ಸಿ ಸಂಜೆ ವೇಳೆಗೆ ಸಿಗಂದೂರು ಸೇತುವೆ ನಿರ್ಮಾಣ ಕುರಿತ ಎನ್‌ಒಸಿ (ನಿರಪೇಕ್ಷಣಾ ಪತ್ರ)ವನ್ನು ನೀಡಿದೆ.

KPLC awaken by Harathalu halappa protest gave NOC to Sigandhur bridge

ಕೆಪಿಎಲ್‌ಸಿ ನೀಡಿರುವ ನಿರಪೇಕ್ಷಣಾ ಪತ್ರವನ್ನು ತನ್ನ ಫೇಸ್‌ಬುಕ್ ಖಾತೆಯಲ್ಲಿ ಪ್ರಕಟಿಸಿರುವ ಶಾಸಕ, ಎನ್‌ಓಸಿ ನೀಡಲು 45 ದಿನಗಳಿಂದ ಮೀನಾಮೇಷ ಎಣಿಸುತ್ತಿದ್ದ ಅಧಿಕಾರಿಗಳು , KPCL ಕಚೇರಿ ಎದುರು ಧರಣಿ ಕೂತ ವಿಷಯ ಮಾಧ್ಯಮದಲ್ಲಿ ಬಿತ್ತರವಾಗುತ್ತಿದ್ದಂತೆ , ಕೆಲವೇ ಗಂಟೆಗಳಲ್ಲಿ N.O.C ನೀಡಿದ್ದಾರೆ' ಎಂದು ಬರೆದುಕೊಂಡಿದ್ದಾರೆ.

ಸಿಗಂದೂರು ಸೇತುವೆ ಕಾಮಗಾರಿಗೆ ನಿತೀನ್ ಗಡ್ಕರಿ ಚಾಲನೆ ಸಿಗಂದೂರು ಸೇತುವೆ ಕಾಮಗಾರಿಗೆ ನಿತೀನ್ ಗಡ್ಕರಿ ಚಾಲನೆ

ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿಗೆ ಕೇಂದ್ರ ಭೂ ಸಾರಿಗೆ ಸಚಿವ ನಿತೀನ್ ಗಡ್ಕರಿ ಚಾಲನೆ ನೀಡಿದ್ದರು. ಈ ಸೇತುವೆ ನಿರ್ಮಾಣಕ್ಕೆ 7 ಸಾವಿರ ಕೋಟಿ ವೆಚ್ಚವಾಗುತ್ತದೆ.ಸೇತುವೆ ಹೇಗಿರುತ್ತದೆ, ಪ್ಲಾನಿಂಗ್ ಏನು: ಅಂಬಾರಗೋಡ್ಲು-ಕಳಸವಳ್ಳಿ ಮಧ್ಯೆ 2.16 ಕಿ,ಮೀ ಉದ್ದದ ಸೇತುವೆ ನಿರ್ಮಾಣವಾಗಲಿದೆ. ಆದರೆ ಇದಕ್ಕೆ ಕೆಪಿಎಲ್‌ಸಿ ನಿರಪೇಕ್ಷಣಾ ಪತ್ರ ನೀಡಿಲ್ಲ ಎಂದು ಅವರು ಆಕ್ರೋಶಗೊಂಡಿದ್ದರು.

ತಮ್ಮ ಪ್ರತಿಭಟನೆಯ ಸುದ್ದಿಯನ್ನು ಬಿತ್ತರ ಮಾಡಿದ ಸುದ್ದಿ ಮಾಧ್ಯಮಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

English summary
Sagara MLA Harthalu Halappa did protest against KPLC for not giving NOC to Sigandhur bridge. After the Halappa's protest withing hours KPLC given NOC letter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X