ವಕೀಲ ವೃಂದಕ್ಕೆ ಆರ್ಥಿಕ ನೆರವು ನೀಡಬೇಕು: ಡಿಕೆ ಶಿವಕುಮಾರ್
ಬೆಂಗಳೂರು, ಮೇ 30: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಕೀಲ ವೃಂದಕ್ಕೆ ಆರ್ಥಿಕ ನೆರವು ನೀಡಬೇಕು ಎಂದು ಮನವಿ ಮಾಡಿದ್ದಾರೆ. ಲಾಕ್ ಡೌನ್ನಿಂದ ಸಂಕಷ್ಟದಲ್ಲಿ ಇರುವ ವಕೀಲರಿಗೆ ಸಹಾಯ ಮಾಡಬೇಕು ಎಂದಿದ್ದಾರೆ.
''ಕರ್ನಾಟಕ ರಾಜ್ಯ ವಕೀಲರ ಪರಿಷತ್ತು 1.5 ಲಕ್ಷ ವಕೀಲರಿದ್ದು, ಇದರಲ್ಲಿ ಅನೇಕರು ಇದೇ ವೃತ್ತಿಯನ್ನೇ ಅವಲಂಬಿಸಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಕೋರ್ಟ್ ಕಲಾಪಗಳು ನಡೆದಿಲ್ಲ. ಹೀಗಾಗಿ, ಇವರುಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.'' ಎಂದು ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಆಂತರಿಕ ಜಗಳ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದಿಷ್ಟು
ಲಾಕ್ಡೌನ್ನಿಂದ ತೊಂದರೆಯಲ್ಲಿರುವ ವಕೀಲ ವೃಂದಕ್ಕೆ ಸರ್ಕಾರ 25 ಕೋಟಿ ನೆರವು ನೀಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಡಿಕೆ ಶಿವಕುಮಾರ್ ಮನವಿ ಪತ್ರ ನೀಡಿದ್ದಾರೆ.
ಮನವಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಷತ್ತಿನ ವಕೀಲ ವೃಂದಕ್ಕೆ ಕೋರಿರುವಂತೆ 25 ಕೋಟಿ ಆರ್ಥಿಕ ನೆರವು ನೀಡುವ ಬಗ್ಗೆ ಪರಿಶೀಲಿಸಿ ಸೂಕ್ತ ಆದೇಶ ಮಾಡಲು ತಮ್ಮಲ್ಲಿ ಕೋರಿದೆ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.
ರಾಜ್ಯದಲ್ಲಿ 1.5 ಲಕ್ಷ ವಕೀಲರಿದ್ದು, ಇದೇ ವೃತ್ತಿಯನ್ನೇ ಅವಲಂಬಿಸಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಕೋರ್ಟ್ ಕಲಾಪಗಳು ನಡೆಯದೆ ಇವರುಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
— Karnataka Congress (@INCKarnataka) May 29, 2020
ವಕೀಲ ವೃಂದಕ್ಕೆ ಸರ್ಕಾರ ₹ 25 ಕೋಟಿ ನೆರವು ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ @DKShivakumar ಅವರು ಸಿಎಂ @BSYBJP ಅವರಿಗೆ ಮನವಿ ಪತ್ರ ನೀಡಿದರು. pic.twitter.com/DtshSbZnCg
ರಾಜ್ಯ ಸರ್ಕಾರ ಈಗಾಗಲೇ ಅನೇಕ ವಲಯಗಳಿಗೆ ಆರ್ಥಿಕ ನೆರವು ನೀಡಿದೆ. ಕೊರೊನಾ ಲಾಕ್ಡೌನ್ನಿಂದ ತೊಂದರೆಯಲ್ಲಿರುವವರಿಗೆ ಸಹಾಯ ಹಸ್ತ ಚಾಚಿದೆ. ಅದೇ ರೀತಿ ವಕೀಲರ ಬಳಗಕ್ಕೆ ಸಹ ನೆರವು ನೀಡಬೇಕು ಎನ್ನುವುದು ಡಿಕೆ ಶಿವಕುಮಾರ್ ಕೋರಿಕೆಯಾಗಿದೆ.