ರಂಗಶಂಕರದಲ್ಲಿ ಕೋವಿಗೊಂದು ಕನ್ನಡಕ ಮತ್ತೆ ಪ್ರದರ್ಶನ
ಬೆಂಗಳೂರು, ಏಪ್ರಿಲ್ 12: ಕೋವಿ ಹಿಡಿದು ತನ್ನ ಶತ್ರುವನ್ನು ಮುಗಿಸಲು ಹೊರಟ ಮುದುಕನೊಬ್ಬನಿಗೆ ಕಣ್ಣಿನ ದೃಷ್ಟಿಯೇ ಸರಿಯಿಲ್ಲ. ಶತ್ರುವನ್ನು ಮುಗಿಸಲು ದೃಷ್ಟಿ ಸರಿಯಾಗಬೇಕು, ಹಾಗಾಗಿ ಆತನಿಗೊಂದು ಕನ್ನಡಕ ಬೇಕು. ಮೊಮ್ಮಗನೊಂದಿಗೆ ಕಣ್ಣಿನ ವೈದ್ಯನ ಬಳಿ ಬರುವ ಮುದುಕ ತನ್ನ ದೃಷ್ಟಿ ಸರಿಪಡಿಸಿಕೊಂಡನೇ ? ನಿಜಕ್ಕೂ ಆತನ ಸಮಸ್ಯೆ ಕನ್ನಡಕದ್ದೇ? ಕನ್ನಡಕ ಆತನಿಗೆ ಬೇಕಿತ್ತೇ, ಆತನ ಶತ್ರುವನ್ನು ಮುಗಿಸಲು ಬೇಕಾದ ಕೋವಿಗೇ ಕನ್ನಡಕ ಬೇಕಿತ್ತೇ? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಲು ,ನೋಡಿ ನಾಟಕ 'ಕೋವಿಗೊಂದು ಕನ್ನಡಕ' !
ನಾಟಕ: ಸ್ಲಾವೋಮಿರ್ ಮ್ರೋಜೆಕ್ ರ ''ಚಾರ್ಲಿ'' ಆಧಾರಿತ 'ಕೋವಿಗೊಂದು ಕನ್ನಡಕ' ನಾಟಕ
ರೂಪಾಂತರ ಮತ್ತು ನಿರ್ದೇಶನ : ವೆಂಕಟೇಶ್ ಪ್ರಸಾದ್
ರಂಗ ಶಾಸ್ತ್ರ : ನಿಶಾ ಅಬ್ದುಲ್ಲಾ
ರಂಗ
ವಿನ್ಯಾಸ:
ಶ್ರೀಧರ್
ಮೂರ್ತಿ
ಸಂಗೀತ
ಸಂಯೋಜನೆ
:
ಉತ್ಥಾನ
ಭಾರಿಘಾಟ್
ಬೆಳಕು
ವಿನ್ಯಾಸ
:
ವಿನಯ್
ಚಂದ್ರ
ಪಿ.
ನಿರ್ಮಾಣ
ನಿರ್ವಹಣೆ:
ಅರುಣ್
ಡಿ.ಟಿ,
ಸುಷ್ಮ
ರಂಗದ
ಮೇಲೆ:
ವಿಜಯ್
ಕುಲ್ಕರ್ಣಿ,
ರಾಗ್
ಅರಸ್,
ಸುನಿಲ್
ಕುಮಾರ್
ವಿ.
ಭಿತ್ತಿಪತ್ರ
ವಿನ್ಯಾಸ
:
ಸತೀಶ್
ಗಂಗಯ್ಯ
ದಿನಾಂಕ:
ಏಪ್ರಿಲ್
15,
2021
ಸ್ಥಳ:
ರಂಗಶಂಕರ,
ಜೆಪಿ
ನಗರ,
ಬೆಂಗಳೂರು
ಸಮಯ:
ಸಂಜೆ
7:30
ಟಿಕೆಟ್
ಗಳಿಗಾಗಿ
ಸಂಪರ್ಕಿಸಿ:
99722
55400
Recommended Video
ಬೆಂಗಳೂರು
ಥಿಯೇಟರ್
ಕಲೆಕ್ಟಿವ್
ಬಗ್ಗೆ:
2015
ರಲ್ಲಿ
ಚೆರ್ರಿ
ತೋಟ
ನಾಟಕದೊಂದಿಗೆ
ರೂಪುಗೊಂಡ
ರಂಗ
ತಂಡ
'ಬೆಂಗಳೂರು
ಥಿಯೇಟರ್
ಕಲೆಕ್ಟಿವ್'.
ರಂಗ
ಭೂಮಿಯಲ್ಲಿ
ಹೊಸತನ್ನು
ಹುಡುಕಿ
ಹೋರಾಟ,
ಸುಮಾರು
25
ವರ್ಷ
ಗಳ
ಒಟ್ಟು
ಅನುಭವವುಳ್ಳ
3
ಗೆಳೆಯರ
ಕನಸು,
ಬೆಂಗಳೂರು
ಥೀಯೇಟರ್
ಕಲೆಕ್ಟಿವ್,
ರೂಪುಗೊಂಡಿದ್ದು
ರಂಗ
ಶಂಕರದ
ಯುವ
ನಾಟಕೋತ್ಸವದಲ್ಲಿ
ವೆಂಕಟೇಶ್
ಪ್ರಸಾದ್
ರವರಿಗೆ
ನಾಟಕ
ನಿರ್ದೇಶಿಸಲು
ಅವಕಾಶ
ದೊರೆತಾಗ.
ಜಾಗತಿಕ
ರಂಗಭೂಮಿಯಲ್ಲಿ
ನಡೆಯುತ್ತಿರುವ
ಹೊಸ
ಪ್ರಕಾರಗಳನ್ನು
ಅಳವಡಿಸಿಕೊಳ್ಳುವ
ಮತ್ತು
ಕನ್ನಡದಲ್ಲಿ
ಪ್ರಯೋಗಿಸುವ
ಹಂಬಲದಿಂದ
ಹುಟ್ಟಿದ
ಬೆಂಗಳೂರು
ಥೀಯೇಟರ್
ಕಲೆಕ್ಟಿವ್
ಗೆ
ಈಗ
3
ವರ್ಷ
ತುಂಬಿದೆ.