ಕಿಡ್ನಾಪ್, ಹಲ್ಲೆ ಪ್ರಕರಣ: ಬಿಗ್ ಬಾಸ್ ಖ್ಯಾತಿ ಕಿಟ್ಟಿಗೆ ಜಾಮೀನು
ಬೆಂಗಳೂರು, ಮೇ 18: ಬಾರ್ ಸಪ್ಲೈಯರ್ ಗಿರೀಶ್ ಅಪಹರಣ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಖ್ಯಾತಿಯ ಸುನಾಮಿ ಕಿಟ್ಟಿಗೆ ಜಾಮೀನು ಸಿಕ್ಕಿದೆ
ಬಿಗ್ ಬಾಸ್ ಕನ್ನಡ ಶೋನ ಸ್ಪರ್ಧಿ, ಥಕಾ ಧಿಮಿ ಥಾ, ಡ್ಯಾನ್ಸಿಂಗ್ ಸ್ಟಾರ್ ಶೋ ವಿಜೇತ ಪ್ರದೀಪ್ ಅಲಿಯಾಸ್ ಸುನಾಮಿ ಕಿಟ್ಟಿ ಅವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
ಗಿರೀಶ್ ಅಪಹರಣ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುನಾಮಿ ಕಿಟ್ಟಿ ಹಾಗೂ ಆತನ ಗೆಳೆಯರಾದ ಯೋಗೇಂದ್ರ ಹಾಗೂ ಅರ್ಜುನ್ ಅವರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದರು.
ಜ್ಞಾನಭಾರತಿ ಪೊಲೀಸರು, ಅಪಹರಣ ಮತ್ತು ಅಕ್ರಮ ಶಸ್ತ್ರಾಸ್ತ್ರ ಕಾಯಿದೆಯಡಿ ಸುನಾಮಿ ಕಿಟ್ಟಿ ಸೇರಿದಂತೆ, ಸ್ನೇಹಿತರಾದ ಯೋಗಂದ್ರ ಮತ್ತು ಅರ್ಜುನ್ ಮೇಲೆ ಪ್ರಕರಣ ದಾಖಲಿಸಿದ್ದರು.
ಕಿಟ್ಟಿ ಸ್ನೇಹಿತ ಸುನೀಲ್ ಪತ್ನಿಯನ್ನು ತೌಶಿಕ್ ಎಂಬುವವರು ಪ್ರೀತಿಸುತ್ತಿದ್ದಿದ್ದು ಇದಕ್ಕೆಲ್ಲ ಕಾರಣ ಎನ್ನಲಾಗಿದೆ. ಸಪ್ಲೈಯರ್ ಬಳಿ ತೌಶಿಕ್ ಫೋಟೋ ತೋರಿಸಿ ಅವರ ಬಗ್ಗೆ ಮಾಹಿತಿ ಕೇಳಿದ್ದಾರೆ. ತೌಶಿಕ್ ತೋರಿಸುವಂತೆ ಬಾರ್ ಸಪ್ಲೈಯರ್ ಗಿರೀಶ್ ನನ್ನು ಅಪಹರಿಸಿ, ಹಲ್ಲೆ ಮಾಡಲಾಗಿತ್ತು.