ಬೆಂಗಳೂರು ಕೆರೆಗಳನ್ನು ಕಾಪಾಡಿ ಎಂದು ಸಿಎಂಗೆ ಕಿಚ್ಚ ಸುದೀಪ್ ಪತ್ರ
ಬೆಂಗಳೂರು, ಆಗಸ್ಟ್ 08 : ಇರುವ ಬೆರಳೆಣಿಕೆಯಷ್ಟು ಕೆರೆಗಳನ್ನು ಕಾಪಾಡಿ, ಡಿನೋಟಿಫಿಕೇಷನ್ ಭೂತದಿಂದ ಬೆಂಗಳೂರಿನಲ್ಲಿ ಸಾವಿನಂಚಿಗೆ ತಲುಪಿರುವ ಕೆರೆಗಳನ್ನು ಪಾರು ಮಾಡಿ ಎಂದು ಕನ್ನಡ ನಟ 'ಕಿಚ್ಚ' ಸುದೀಪ್ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳಕಳಿಯಿಂದ ಮಂಗಳವಾರ ಪತ್ರ ಬರೆದಿದ್ದಾರೆ.
ಕೆರೆಗಳ ಡಿನೋಟಿಫಿಕೇಶನ್ ಕೈಬಿಡುವಂತೆ ಸಿಎಂಗೆ ಸದಾನಂದ ಗೌಡ ಪತ್ರ
ಆ ಪತ್ರದ ಸಾರಾಂಶ ಇಲ್ಲಿದೆ.
ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿ ಅವರಿಗೆ,
ಗೌರವಾನ್ವಿತ ಸಿಎಂ ಸರ್,
ನಮ್ಮ ಕೆರೆಗಳು ನಮ್ಮ ಜೀವನಾಡಿ. ಅವುಗಳಿಗೆ ಜೀವ ತುಂಬುವುದೆಂದರೆ ಪ್ರಕೃತಿಗೇ ಜೀವ ತುಂಬಿದಂತೆ. ಇಲ್ಲಿರುವ ಪ್ರತಿ ಗಿಡ, ಮರ, ಹಕ್ಕಿಗಳು, ಪ್ರಾಣಿಗಳು, ಮನುಷ್ಯರು... ಪ್ರತಿಯೊಂದೂ ಪ್ರಕೃತಿಯ ಭಾಗವೆ. ಕೆರೆಗಳನ್ನು ಕೊಲ್ಲುವುದೆಂದರೆ ನಮ್ಮ ತಾಯಿ ಪ್ರಕೃತಿಯನ್ನು ಹತ್ಯೆಗೈದಂತೆ.
ಕೆರೆಗಳ ಡಿನೋಟಿಫೀಕೇಶನ್ ವಿರುದ್ಧ ರಾಜ್ಯಪಾಲರಿಗೆ ಎಚ್.ಡಿ.ಕೆ ಪತ್ರ
ನಿಮಗೆ ಅತ್ಯಂತ ವಿನಮ್ರತೆಯಿಂದ ವಿನಂತಿಸಿಕೊಳ್ಳುತ್ತೇನೆ. ದಯವಿಟ್ಟು ಒಣಗಿ ಹೋಗಿರುವ ಕೆರೆಗಳ ಡಿನೋಟಿಫಿಕೇಷನ್ ಮಾಡುವುದನ್ನು ಮರುಪರಿಶೀಲಿಸಬೇಕು. ಪ್ರಕೃತಿ ಮಾತೆ ಕೆರಳುವುದಕ್ಕೆ ನಾವು ಕಾರಣರಾಗುವುದನ್ನು ತಡೆಯಬೇಕಿದೆ. ನಾವೀಗ ಸಾಕಷ್ಟು ಕಳೆದುಕೊಂಡಿದ್ದೇವೆ. ಆದರೆ, ಉಳಿದಿರುವುದನ್ನಾದರೂ ನಾವು ಉಳಿಸಿಕೊಳ್ಳಬಹುದಲ್ಲವೆ?
ನಾನು ಒಬ್ಬ ನಟನಾಗಿ ಈ ಪತ್ರವನ್ನು ನಿಮಗೆ ಬರೆಯುತ್ತಿಲ್ಲ. ಈ ಪತ್ರವನ್ನು ಎಲ್ಲ ಶ್ರೀಸಾಮಾನ್ಯರ ಪರವಾಗಿ ಬರೆದಿದ್ದೇನೆ. ಈ ರಾಜ್ಯದೆಡೆಗೆ, ನಗರದೆಡೆಗೆ, ಇಲ್ಲಿ ವಾಸಿಸುವ ಜನರು ಮತ್ತು ಪ್ರಕೃತಿಯ ಮೇಲಿರುವ ಪ್ರೀತಿಯಿಂದ ಈ ಪತ್ರವನ್ನು ಕಳಕಳಿಯಿಂದ ಬರೆದಿದ್ದೇನೆ.
ಇಂತಿ ವಿಶ್ವಾಸಿ,
ಸುದೀಪ್
Namma @KicchaSudeep requesting @CMofKarnataka as a common man about reconsidering Denotifications of Lakes...#ConcernTowardsNature :) pic.twitter.com/kO2wUSFAr2
— KICCHASUDEEPFANS(A)® (@KSFA_Official) August 8, 2017