ಕವಲುದಾರಿಯಲ್ಲಿ ಕನ್ನಡಿಗ: ಅರಿಮೆ ಮಾತುಕತೆ
ಬೆಂಗಳೂರು, ಡಿಸೆಂಬರ್ 12 : ಲೇಖಕ ವಸಂತ್ ಶೆಟ್ಟಿ ಅವರ ಮುನ್ನೋಟ ಮಳಿಗೆಯಲ್ಲಿ ಭಾನುವಾರ(ಡಿಸೆಂಬರ್ 17 )ರಂದು ಕವಲುದಾರಿಯಲ್ಲಿ ಕನ್ನಡಿಗ ಎನ್ನುವ ಶೀರ್ಷಿಕೆಯಲ್ಲಿ ಅರಿಮೆ ಕಾರ್ಯಕ್ರಮ ಆಯೋಜಿಸಲಾಗಿದೆ. ಕನ್ನಡಪರ ಚಿಂತಕರಾದ ಆನಂದ ಜಿ ಅವರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಬೆಳಕಿನ ಮೇಲೆ ಬೆಳಕು ಚೆಲ್ಲೋಣ: ಅರಿಮೆ ಮಾತುಕತೆ
ಕನ್ನಡಿಗ ಇಂದು ಕವಲುದಾರಿಯಲ್ಲಿದ್ದಾನೆ. ಹೊರಗಿನ ಸಿದ್ಧಾಂತಗಳ ಗಾಳಿಗುದ್ದಾಟದಲ್ಲಿ ಕನ್ನಡಿಗನ ಬದುಕು, ಏಳಿಗೆಯ ವಿಷಯಗಳು ಮೂಲೆಗುಂಪಾಗಿವೆ. ಕನ್ನಡಿಗರ ಜನಸಂಖ್ಯೆ ಬೆಳವಣಿಗೆ ದರ ಕುಸಿಯುತ್ತಿದೆ. ಕನ್ನಡಿಗರನ್ನು ಒಡೆದು ಆಳುವ ದನಿಗಳು ಹೆಚ್ಚುತ್ತಿವೆ. ಈ ಹೊತ್ತಲ್ಲಿ ಕನ್ನಡಿಗರ ಮುಂದಿನ ಇಂದಿನ ಸಮಸ್ಯೆಗಳು.
ಅವುಗಳಿಗೆ ಬೇಕಿರುವ ಪರಿಹಾರದ ಆಲೋಚನೆಗಳ ಕುರಿತು ಒಳನೋಟಗಳುಳ್ಳ "ಕನ್ನಡಿಗ - ಮರೆವು, ಅರಿವು" ಅನ್ನುವ ಹೊಸತೊಂದು ಪುಸ್ತಕವನ್ನು ಕನ್ನಡ ಪರ ಚಿಂತಕ ಆನಂದ್ ಬರೆದಿದ್ದಾರೆ. ಈ ಪುಸ್ತಕದಲ್ಲೇನಿದೆ, ಅದರ ಆಶಯಗಳೇನು ಅನ್ನುವ ಕುರಿತು ಮುನ್ನೋಟದ ಮಾತುಕತೆ ಮುನ್ನೋಟ ಕಾರ್ಯಕ್ರಮದಲ್ಲಿ ಅವರು ಮಾತನಾಡಲಿದ್ದಾರೆ.
ನಮ್ಮ ರಾಷ್ಟ್ರಕೂಟರ ಇತಿಹಾಸ ನಿಮಗೆಷ್ಟು ಗೊತ್ತು?
ಏನು- ಕವಲುದಾರಿಯಲ್ಲಿ ಕನ್ನಡಿಗ ಮಾತುಕತೆ
ಎಲ್ಲಿ- ಮುನ್ನೋಟ ಬುಕ್ ಸ್ಟೋರ್, ನಂ67 , ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿವಿಜಿ ರಸ್ತೆ, ನಾಗಸಂದ್ರ ಸರ್ಕಲ್ ಬಳಿ, ಬಸವನಗುಡಿ.
ಯಾವಾಗ- 17 ಡಿಸೆಂಬರ್ , ಭಾನುವಾರ ಬೆಳಿಗ್ಗೆ 11.30