ಕರವೇ ಐಟಿ ಘಟಕದಿಂದ ಉದ್ಯೋಗಾರ್ಥಿಗಳಿಗೆ ಶಿಬಿರ
ಬೆಂಗಳೂರು, ಮಾ.3: ಕರ್ನಾಟಕ ರಕ್ಷಣಾ ವೇದಿಕೆಯ "ಐಟಿ ಘಟಕ" ಕನ್ನಡಿಗ ಉದ್ಯೋಗಾರ್ಥಿಗಳ ಅನುಕೂಲಕ್ಕಾಗಿ ಎರಡನೇ ಬಾರಿಗೆ "ಉದ್ಯೋಗ ಮಾರ್ಗದರ್ಶನ ಶಿಬಿರ"ವನ್ನು ಹಮ್ಮಿಕೊಂಡಿದೆ.
ಕರ್ನಾಟಕ ರಕ್ಷಣಾ ವೇದಿಕೆಯು ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ನಾಡು ನುಡಿಯ ವಿಚಾರವಾಗಿ ಕಳೆದ 15 ವರ್ಷಗಳಿಂದ ಹೋರಾಟಗಳನ್ನು ಮಾಡಿಕೊಂಡು ಬರುತ್ತಿರುವುದು ನಾಡಿನ ಜನತೆಗೆ ತಿಳಿದಿದೆ.
ಬೆಂಗಳೂರು ಮಹಾನಗರದಲ್ಲಿ ಸುಮಾರು ಎರಡು ದಶಕಗಳ ಹಿಂದೆ ಐಟಿ ಉದ್ಯಮವು ಸ್ಥಾಪನೆಯಾಗಿ ಇಂದು ಹೆಮ್ಮರವಾಗಿ ಬೆಳೆದಿದೆ. ದೇಶದ ವಿವಿಧ ಭಾಗಗಳಿಂದ ಜನರು ಐಟಿ ಉದ್ಯೋಗ ಅರಸಿ ಬೆಂಗಳೂರಿಗೆ ಬರುತ್ತಿದ್ದಾರೆ. [ಕನ್ನಡಿಗರಿಗೆ ಉದ್ಯೋಗ ಸಿಗಲಿ, ಕರವೇ ಮೆರವಣಿಗೆ]
ಈ
ಸಂದರ್ಭದಲ್ಲಿ
ರಾಜ್ಯದ
ನಾನಾ
ಭಾಗಗಳಲ್ಲಿ
ವಿದ್ಯಾಭ್ಯಾಸ
ಪಡೆದು
ತಮ್ಮ
ಅಭಿರುಚಿಗೆ
ಸರಿಹೊಂದುವ
ಐಟಿ
ಉದ್ಯೋಗವನ್ನು
ಹುಡುಕುತ್ತಿರುವ
ಕನ್ನಡಿಗರಿಗೆ
"ಉದ್ಯೋಗ
ಮಾರ್ಗದರ್ಶನ
ಶಿಬಿರ"ದ
ಮೂಲಕ
ಮಾರ್ಗದರ್ಶನವನ್ನು
ನೀಡುವುದು
ಕರ್ನಾಟಕ
ರಕ್ಷಣಾ
ವೇದಿಕೆಯ
"ಐಟಿ
ಘಟಕ"ದ
ಧ್ಯೇಯೋದ್ದೇಶಗಳಲ್ಲಿ
ಒಂದಾಗಿದೆ.
ಈ ನಿಟ್ಟಿನಲ್ಲಿ ಮಾರ್ಚ್ 14, 2015ರಂದು ಉದ್ಯೋಗ ಮಾರ್ಗದರ್ಶನ ಶಿಬಿರವನ್ನು ಆಯೋಜಿಸಿದ್ದೇವೆ. ವಿವರಗಳು ಹೀಗಿವೆ:
ದಿನಾಂಕ:
ಮಾರ್ಚ್
14,
2015,
ಶನಿವಾರ
ಸ್ಥಳ:
ಮನೋರಮಾ
ಹಾಲ್,
ಇಂಡಿಯನ್
ಇನ್
ಸ್ಟಿಟ್ಯೂಟ್
ಆಫ್
ವರ್ಲ್ಡ್
ಕಲ್ಚರ್,
ಬಿಪಿ
ವಾಡಿಯಾ
ರಸ್ತೆ,
ಬಸವನಗುಡಿ,
ಬೆಂಗಳೂರು
ಸಮಯ:
ಬೆಳಿಗ್ಗೆ
9.30
ರಿಂದ
ಮಧ್ಯಾಹ್ನ
1.30
ರವರೆಗೆ
ನೊಂದಣಿ:
ನೊಂದಾಯಿಸಿಕೊಂಡವರಿಗೆ
ಕಾರ್ಯಕ್ರಮದಲ್ಲಿ
ಭಾಗವಹಿಸಲು
ಅವಕಾಶ
ದೊರೆಯುತ್ತದೆ.
ನೋಂದಾಯಿಸಿಕೊಳ್ಳಲು
ಇಲ್ಲಿ
ಕ್ಲಿಕ್
ಮಾಡಿ
ಐಟಿ
ಘಟಕದ
ಧ್ಯೇಯೋದೇಶಗಳು:
1.
ಉದ್ಯೋಗಾಕಾಂಕ್ಷಿಗಳಿಗೆ
ಉದ್ಯೋಗ
ಮಾರ್ಗದರ್ಶನ
ನೀಡುವುದು.
2.
ಉದ್ಯೋಗಾಕಾಂಕ್ಷಿಗಳಿಗೆ
ಸಹಕಾರಿಯಾಗುವಂತಹ
ಉದ್ಯೋಗ
ಮಾಹಿತಿ
ಕೇಂದ್ರವನ್ನು
ಸ್ಥಾಪಿಸುವುದು
3.
ಐಟಿ
ಉದ್ಯೋಗ
ಅರಸಿ
ನಾಡಿಗೆ
ಹಲವು
ಪರಭಾಷಿಕರು
ಬರುತ್ತಿದ್ದಾರೆ.
ಅವರನ್ನು
ಮುಖ್ಯವಾಹಿನಿಗೆ
ತರಲು
"ಕನ್ನಡ
ಕಲಿ"
ಕಾರ್ಯಕ್ರಮವನ್ನು
ಹಮ್ಮಿಕೊಳ್ಳಲಾಗುವುದು.
[ನಮ್ಮ
ಮೆಟ್ರೋದಲ್ಲಿ
ಕನ್ನಡಿಗರಿಗೆ
ಉದ್ಯೋಗ:
ಗಡುವು
]
ಇದು
ಕರ್ನಾಟಕ
ರಕ್ಷಣಾ
ವೇದಿಕೆಯ
ಐಟಿ
ಘಟಕವು
ಕನ್ನಡಿಗರ
ಅನುಕೂಲಕ್ಕೋಸ್ಕರ
ಉಚಿತವಾಗಿ
ಆಯೋಜಿಸುತ್ತಿರುವ
ಶಿಬಿರವಾಗಿದೆ.
ನಿಮ್ಮ
ಪರಿಚಿತರೊಂದಿಗೆ
ಹಂಚಿಕೊಂಡು
ಹೆಚ್ಚಿನ
ಜನರಿಗೆ
ತಲುಪಿಸಬೇಕಾಗಿ
ಕರ್ನಾಟಕ
ರಕ್ಷಣಾ
ವೇದಿಕೆ
ಐಟಿ
ಘಟಕ
ಉಪಾದ್ಯಕ್ಷರಾದ
ಅಮರನಾಥ್
ಶಿವಶಂಕರ್
ಕೋರಿದ್ದಾರೆ.
ಒನ್ ಇಂಡಿಯಾ ಸುದ್ದಿ