ಬೆಂಗಳೂರಿನಲ್ಲಿ ಜೂ30ರ ಪ್ರಮುಖ ರಾಜಕೀಯ ವಿದ್ಯಮಾನಗಳು
ಬೆಂಗಳೂರು, ಜೂ.30: ಬೆಂಗಳೂರಿನಲ್ಲಿ ಗುರುವಾರ (ಜೂ .30) ನಡೆಯಲಿರುವ ವಿವಿಧ ಕಾರ್ಯಕ್ರಮಗಳು, ರಾಜಕೀಯ ಪಕ್ಷಗಳ ಕಾರ್ಯಕ್ರಗಳು, ಪ್ರತಿಭಟನೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ:
ಬೆಳಗ್ಗೆ 9.30: ತುಮಕೂರಿನ ಶ್ರೀ ಸಿದ್ಧಾರ್ಥ ಎಜ್ಯುಕೇಶನ್ ಸೊಸೈಟಿ ಮತ್ತು ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಫೌಂಡೇಶನ್ ವತಿಯಿಂದ 'ವೃಕ್ಷಮಾತೆ, ಪದ್ಮಶ್ರೀ ಡಾ. ಸಾಲುಮರದ ತಿಮ್ಮಕ್ಕನವರ 111ನೇ ಜನ್ಮದಿನದ ಸಂಭ್ರಮ ಹಾಗೂ ನ್ಯಾಷನಲ್ ಗ್ರೀನರಿ ಪ್ರಶಸ್ತಿ -2020 ಪ್ರದಾನ ಸಮಾರಂಭ, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಭವನ, ವಸಂತ ನಗರ.
ಬೆಳಗ್ಗೆ 11ರಿಂದ: ಬೆಂಗಳೂರಿನ ಬಾಷ್ ಇಂಡಿಯಾ ಕಂಪನಿಯ ಸ್ಮಾರ್ಟ್ ಕ್ಯಾಂಪಸ್ ಉದ್ಘಾಟನೆ, ಸ್ಥಳ: ಆಡುಗೋಡಿ, ಬೆಂಗಳೂರು.
ಪ್ರತಿಭಟನೆ
ಬೆಳಗ್ಗೆ 11: ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದಿಂದ ಸತ್ಯ ಪ್ರತಿಪಾದನಾ ಸತ್ಯಾಗ್ರಹ ಹೋರಾಟ- ಬೆಂಗಳೂರು ಚಲೋ ಹಮ್ಮಿಕೊಂಡಿವೆ. ರಾಜ್ಯದಾದ್ಯಂತ ಇರುವ ಜಂಗಮ ಕ್ಷೇಮಾಭಿವೃದ್ಧಿ ಸಂಘಟನೆಗಳು ಬೇಡ ಜಂಗಮರ ಸಂಘ, ಸಂಸ್ಥೆಗಳು, ರಾಜ್ಯದ ವಿವಿಧ ಮಠಾಧೀಶರು, ವಿವಿಧ ಜಿಲ್ಲೆಗಳ ಸಮುದಾಯ ವರ್ಗ, ಒಕ್ಕೂಟದ ಅಧ್ಯಕ್ಷ ಬಿ.ಡಿ.ಹಿರೇಮಠ ಭಾಗಿ, ಸ್ಥಳ: ಸ್ವಾತಂತ್ರ್ಯ ಉದ್ಯಾನವನ, ಬೆಂಗಳೂರು.
ಮಧ್ಯಾಹ್ನ 12: ಬೆಂಗಳೂರು ಜಿಲ್ಲಾಧಿಕಾರಿಗಳ ಮೇಲಿನ ಲಂಚ ಪ್ರಕರಣ- ಎಸಿಬಿ ಸಂಸ್ಥೆ ಕಲೆಕ್ಷನ್ ಸೆಂಟರ್ ಎಂದು ವಿರೋಧಿಸಿ ಆಮ್ ಆದ್ಮಿ ಪಕ್ಷ (ಎಎಪಿ) ಕಾರ್ಯಕರ್ತರಿಂದ ಭಿತ್ತಿ ಫಲಕ ಪ್ರದರ್ಶನ, ಎಎಪಿ ಮುಖಂಡರು, ಕಾರ್ಯಕರ್ತರು ಭಾಗಿ, ಸ್ಥಳ: ಖನಿಜ ಭವನ ದಲ್ಲಿರುವ ಎಸಿಬಿ ಕಚೇರಿ ಮುಂದೆ, ರೇಸ್ಕೋರ್ಸ್ ರಸ್ತೆ, ಬೆಂಗಳೂರು,
Recommended Video