ವಿವಿಧ ನಿಗಮದ ನಿರ್ದೇಶಕರ ಮಂಡಳಿಗಳ ಜತೆ ಸಿಎಂ ಸಭೆ
ಬೆಂಗಳೂರು, ಜು.04: ಮೀನುಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿರುವ 'ಆಧುನೀಕರಣ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭ' ಸೇರಿದಂತೆ ಜುಲೈ 4ರಂದು ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಆ ಎಲ್ಲಾ ಪ್ರಮುಖ ವಿದ್ಯಮಾನಗಳ ವಿವರ ಹೀಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಳಗ್ಗೆ 11: ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ನಿರ್ದೇಶಕರ ಮಂಡಳಿ ಸಭೆ, ಸ್ಥಳ: ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.
ಮಧ್ಯಾಹ್ನ 12: ಕರ್ನಾಟಕ ನೀರಾವರಿ ನಿಗಮ ನಿಯಮಿತ ನಿರ್ದೇಶಕರ ಮಂಡಳಿ ಜತೆ ಸಭೆ, ಸ್ಥಳ: ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.
ಸಂಜೆ 4: ಸರ್ಕಾರಿ ಮತ್ಸ್ಯಾಲಯ, ಕಬ್ಬನ್ ಪಾರ್ಕ್ ಬೆಂಗಳೂರು ಸಹಭಾಗಿತ್ವದಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿರುವ 'ಆಧುನೀಕರಣ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭ', ಸ್ಥಳ: ಸರ್ಕಾರಿ ಮತ್ಸ್ಯಾಲಯ ಆವರಣ, ಕಬ್ಬನ್ ಪಾರ್ಕ್, ಬೆಂಗಳೂರು.
ಬಿಜೆಪಿ
ಬೆಳಗ್ಗೆ 10.15: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರಿಂದ ಪ್ರತಿಕಾಗೋಷ್ಠಿ, ಸ್ಥಳ: ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್, ಬೆಂಗಳೂರು.
ಬೆಳಗ್ಗೆ 10: ಐಬ್ಯಾಬ್ ಮತ್ತು ಐ.ಐ.ಎಸ್ ಸಿ. ಸಹಭಾಗಿತ್ವದಲ್ಲಿ ನಿರ್ಮಾಣವಾಗಲಿರುವ "ವಿಷ ನಿರೋಧಕ (ಪ್ರತಿವಿಷ) ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ"ಕ್ಕೆ ಚಾಲನೆ, ಐಟಿ, ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಭಾಗಿ, ಸ್ಥಳ: ಐಬ್ಯಾಬ್, ಬಯೊಟೆಕ್ ಪಾರ್ಕ್, ಜಿ.ಎನ್. ರಾಮಚಂದ್ರನ್ ರಸ್ತೆ, ಎಲೆಕ್ಟ್ರಾನಿಕ್ಸ್ ಸಿಟಿ 1ನೇ ಹಂತ.
ಕಾಂಗ್ರೆಸ್
ಬೆಳಗ್ಗೆ 11: ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಭೇಟಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉಪಸ್ಥಿತಿ, ಸ್ಥಳ: ವಿರೋಧ ಪಕ್ಷದ ನಾಯಕರ ನಿವಾಸ, ಬೆಂಗಳೂರು.
ಬೆಳಗ್ಗೆ 11: ಗದಗಿನಲ್ಲಿ ನಡೆಯಲಿರುವ ನಾ ನಾಯಕಿ ಕಾರ್ಯಕ್ರಮಕ್ಕೆ ಆನ್ ಲೈನ್ ಮೂಲಕ ಚಾಲನೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗಿ, ಸ್ಥಳ: ಕೆಪಿಸಿಸಿ ಕಚೇರಿ, ಕ್ವೀನ್ಸ್ ರಸ್ತೆ, ಬೆಂಗಳೂರು.
ಮಧ್ಯಾಹ್ನ 12: ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಮುಖಂಡು ಮತ್ತು ಕಾರ್ಯಕರ್ತರ ಭೇಟಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉಪಸ್ಥಿತಿ, ಸ್ಥಳ: ಕೆಪಿಸಿಸಿ ಕಚೇರಿ, ಕ್ವೀನ್ಸ್ ರಸ್ತೆ, ಬೆಂಗಳೂರು.
ಪ್ರತಿಭಟನೆ:
ಬೆಳ ಗ್ಗೆ 11: ಸಮಸ್ತ ಕರ್ನಾಟಕದ ಗಾಣಿಗ ಸಮಾಜದ ವತಿಯಿಂದ 'ಗಾಣಿಗ ಅಭಿವೃದ್ದಿ ನಿಗಮ ಮಂಡಳಿಗಾಗಿ ಶಾಂತಿಯುತ ಧರಣಿ', ಸ್ಥಳ: ಸ್ವಾತಂತ್ರ್ಯ ಉದ್ಯಾನವನ, ಬೆಂಗಳೂರು.
Recommended Video