ಬೆಂಗಳೂರು: ಜುಲೈ 5ರ ಪ್ರಮುಖ ರಾಜಕೀಯ ವಿದ್ಯಮಾನಗಳು
ಬೆಂಗಳೂರು, ಜು.5: ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜಂಟಿ ಸುದ್ದಿಗೋಷ್ಠಿ ಸೇರಿದಂತೆ ಜುಲೈ 5ರಂದು ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಆ ಎಲ್ಲಾ ಪ್ರಮುಖ ವಿದ್ಯಮಾನಗಳ ವಿವರ ಹೀಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಳಗ್ಗೆ 11: ರಾಜ್ಯದಲ್ಲಿ ಹೊಸ ಉದ್ಯೋಗ ನೀತಿ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆ ಮತ್ತು ಚರ್ಚೆ, ಸ್ಥಳ: ಸಿಎಂ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.
ಬೆಳಗ್ಗೆ 11.30: ಸಂಶೋಧನೆ ಮತ್ತ ಅಭಿವೃದ್ಧಿ ನೀತಿಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆ, ಸ್ಥಳ: ಸಿಎಂ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.
ಮಧ್ಯಾಹ್ನ 12: ಪೆಟ್ರೋನಾಸ್ ಹೈಡ್ರೋಜನ್ ಮತ್ತು ಕಾಂಟಿನೆಂಟಲ್ ಆಟೊಮೋಟಿವ್ ಕಾಂಪೋನೆಂಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳ ನಡುವಿನ ಒಪ್ಪಂದಕ್ಕೆ ಸಹಿ, ಸ್ಥಳ: ಸಿಎಂ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.
ಮಧ್ಯಾಹ್ನ 12.30: ರಾಜ್ಯದ ಸಾರಿಗೆ ಸ್ಥಿತಿಗತಿಗಳ ಅಧ್ಯಯನಕ್ಕಾಗಿ ಸ್ಥಾಪಿಸಿರುವ ಏಕ ಸದಸ್ಯ ಸಮಿತಿಯೊಂದಿಗೆ ಪೂರ್ವ ಭಾವಿ ಸಭೆ, ಸ್ಥಳ: ಸಿಎಂ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.
ಮಧ್ಯಾಹ್ನ 2.30: ಕಾವೇರಿ ನೀರಾವರಿ ನಿಗಮ ನಿಯಮಿತ ನಿರ್ದೇಶಕರ ಮಂಡಳಿ ಸಭೆ, ಸ್ಥಳ: ವ್ಯವಸ್ಥಾಪಕ ನಿರ್ದೇಶಕರ ಕಚೇರಿ, ಕಾವೇರಿ ನೀರಾವರಿ ನಿಗಮ ನಿಯಮಿತ, 4ನೇ ಮಹಡಿ, ಜಲಮೇಲ್ಮೈ ಮಾಹಿತಿ ಕೇಂದ್ರ ಕಟ್ಟಡ, ಆನಂದರಾವ್ ವೃತ್ತ, ಬೆಂಗಳೂರು.
ಮಧ್ಯಾಹ್ನ 3: ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ವಿಷಯಗಳ ಕುರಿತಂತೆ ಚರ್ಚೆ, ಸ್ಥಳ: ಸಿಎಂ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.
ಕಾಂಗ್ರೆಸ್
ಬೆಳಗ್ಗೆ 11: ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಜಂಟಿ ಸುದ್ದಿಗೋಷ್ಠಿ, ಸ್ಥಳ: ಕೆಪಿಸಿಸಿ ಕಚೇರಿ, ಕ್ವೀನ್ಸ್ ರಸ್ತೆ, ಬೆಂಗಳೂರು.
ಬಿಬಿಎಂಪಿ
ಬೆಳಗ್ಗೆ 10: ಸಾರ್ವಜನಿಕರ ಕುಂದು ಕೊರತೆ ಆಲಿಸಲು ಬಿಬಿಎಂಪಿ ಮುಖ್ಯ ಆಯುಕ್ತರ ತುಷಾರ್ ಗಿರಿನಾಥ್ ಪೂರ್ವ ವಲಯ ಭೇಟಿ, ಸ್ಥಳ: ಜಂಟಿ ಆಯುಕ್ತರ ಕಚೇರಿ, (ಮೆಯೋಹಾಲ್), ಪೂರ್ವ ವಲಯ, ಬೆಂಗಳೂರು.
ಪ್ರತಿಭಟನೆ
ಬೆಳಗ್ಗೆ 11: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ, ಸ್ಥಳ: ಸ್ವಾತಂತ್ರ್ಯ ಉದ್ಯಾನ, ಬೆಂಗಳೂರು.
ಬೆಳಗ್ಗೆ 11: ಸಮಾನ ವೇತನ, ಉದ್ಯೋಗ ಖಾಯಮಾತಿಗೆ ಒತ್ತಾಯಿಸಿ ಪೌರ ಕಾರ್ಮಿಕರ ಪ್ರತಿಭಟನೆ, ಸ್ಥಳ: ಸ್ವಾತಂತ್ರ್ಯ ಉದ್ಯಾನ, ಬೆಂಗಳೂರು.
ಸಿದ್ದರಾಮಯ್ಯ
ಸಂಜೆ 4: ಕೋಲಾರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಶಾಸಕರು, ಮುಖಂಡರ ಭೇಟಿ, ಸ್ಥಳ: ವಿರೋಧ ಪಕ್ಷದ ನಾಯಕರ ನಿವಾಸ,ಬೆಂಗಳೂರು.
ಸಂಜೆ 5: ಮೈಸೂರು ಜಿಲ್ಲೆಗೆ ಪ್ರವಾಸ.
Recommended Video