ಸದನದಲ್ಲಿ ಸ್ಪೀಕರ್ ಅವರೇ ಸುಪ್ರೀಂ: ಸಿದ್ದರಾಮಯ್ಯ
Recommended Video
ಬೆಂಗಳೂರು, ಜುಲೈ 19: ಸದನ ಹೇಗೆ ನಡೆಸಬೇಕು ಎನ್ನುವುದು ಸ್ಪೀಕರ್ ಅವರಿಗೆ ತಿಳಿದಿರುತ್ತದೆ. ಅದು ಅವರ ಅಧಿಕಾರ ವ್ಯಾಪ್ತಿಯಲ್ಲಿರುತ್ತದೆ ಎಂದು ಸಮನ್ವಯ ಸಮಿತಿ ನಾಯಕ ಸಿದ್ದರಾಮಯ್ಯ ಹೇಳಿದರು.
ವಿಶ್ವಾಸಮತ LIVE: ಕಲಾಪ ಮುಂದೂಡಿಕೆ, ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸ್ಪೀಕರ್
ವಿಧಾನಸಭೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ಸದನದಲ್ಲಿ ಸ್ಪೀಕರ್ ಅವರೇ ಸುಪ್ರೀಂ ಆಗಿರುತ್ತಾರೆ. ಸದನ ಹೇಗೆ ನಡೆಯಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ ಎಂದರು.
Photos : ಸದನದಲ್ಲಿ ಗದ್ದಲ, ಅಹೋರಾತ್ರಿ ಧರಣಿ, ಮಾರ್ನಿಂಗ್ ವಾಕ್
ವಿಶ್ವಾಸ ಮತದ ಕುರಿತಂತೆ ಸದನದಲ್ಲಿ ಇನ್ನೂ ಚರ್ಚೆ ನಡೆಯುತ್ತಿದೆ. ವಿಶ್ವಾಸಮತ ಪ್ರಕ್ರಿಯೆ ಆರಂಭವಾದ ಬಳಿಕ ರಾಜ್ಯಪಾಲರು ಮಧ್ಯಪ್ರವೇಶ ಮಾಡುವಂತಿಲ್ಲ. ಕ್ರಿಯಾಲೋಪದ ಮೇಲೆ ಇನ್ನೂ ರೂಲಿಂಗ್ ನೀಡಿಲ್ಲ. ಚರ್ಚೆ ಮುಗಿದ ಬಳಿಕ ರೂಲಿಂಗ್ ಮಾಡಲು ನಮಗೆ ಅವಕಾಶ ನೀಡುತ್ತಾರೆ ಎಂದು ತಿಳಿಸಿದರು.
ಸಿದ್ದು ಮಾಡಿದರೆ ಗರತೀತನ, ಬೇರೆಯವರ ಮಾಡಿದರೆ ಹಾದರವೇ: ಬಿಜೆಪಿ ಶಾಸಕ
'ಬಿಜೆಪಿಯವರು ಹಣ ನೀಡಿದ್ದರು ಎಂಬ ಬಗ್ಗೆ ನಾನು ಹೇಳಿದ್ದಾ ಅಥವಾ ಶ್ರೀನಿವಾಸಗೌಡ ಹೇಳಿದ್ದಾ? ಶ್ರೀನಿವಾಸಗೌಡ ಅವರು ಬಿಜೆಪಿ ಮುಖಂಡರ ಹೆಸರು ಸಮೇತ ಹೇಳಿದ್ದಾರೆ. ವ್ಯಾಪಾರ ಮಾಡಿ ಶಾಸಕರನ್ನು ಮುಂಬೈಗೆ ಕಳುಹಿಸಿರುವ ಬಿಜೆಪಿಯವರು ಆತುರದಲ್ಲಿದ್ದಾರೆ ಎಂದು ಟೀಕಿಸಿದರು.
ಅಂದು ಸಿದ್ದರಾಮಯ್ಯ ವಿರುದ್ಧ, ಇಂದು ಸಿದ್ಧರಾಮಯ್ಯಗೇ ಬದ್ಧ!: ಜೆಡಿಎಸ್ ಸ್ಥಿತಿ
ಚರ್ಚೆ ಇನ್ನೂ ಮುಗಿದಿಲ್ಲ. 20 ಶಾಸಕರು ಇದರಲ್ಲಿ ಭಾಗವಹಿಸಬೇಕಿದೆ. ಇದು ಇಂದು ಮುಗಿಯುತ್ತದೆ ಎಂದು ನನಗೆ ಅನಿಸುತ್ತಿಲ್ಲ. ಸೋಮವಾರವೂ ಇದು ಮುಂದುವರಿಯಬಹುದು ಎಂದು ಹೇಳಿದರು.