ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸದನದಲ್ಲಿ ಸ್ಪೀಕರ್ ಅವರೇ ಸುಪ್ರೀಂ: ಸಿದ್ದರಾಮಯ್ಯ

|
Google Oneindia Kannada News

Recommended Video

Karnataka Crisis : ಸದನ ಹೇಗೆ ನಡೆಸೋದು ಸ್ಪೀಕರ್‍ಗೆ ತಿಳಿದಿರತ್ತೆ

ಬೆಂಗಳೂರು, ಜುಲೈ 19: ಸದನ ಹೇಗೆ ನಡೆಸಬೇಕು ಎನ್ನುವುದು ಸ್ಪೀಕರ್ ಅವರಿಗೆ ತಿಳಿದಿರುತ್ತದೆ. ಅದು ಅವರ ಅಧಿಕಾರ ವ್ಯಾಪ್ತಿಯಲ್ಲಿರುತ್ತದೆ ಎಂದು ಸಮನ್ವಯ ಸಮಿತಿ ನಾಯಕ ಸಿದ್ದರಾಮಯ್ಯ ಹೇಳಿದರು.

ವಿಶ್ವಾಸಮತ LIVE: ಕಲಾಪ ಮುಂದೂಡಿಕೆ, ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸ್ಪೀಕರ್ವಿಶ್ವಾಸಮತ LIVE: ಕಲಾಪ ಮುಂದೂಡಿಕೆ, ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸ್ಪೀಕರ್

ವಿಧಾನಸಭೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ಸದನದಲ್ಲಿ ಸ್ಪೀಕರ್ ಅವರೇ ಸುಪ್ರೀಂ ಆಗಿರುತ್ತಾರೆ. ಸದನ ಹೇಗೆ ನಡೆಯಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ ಎಂದರು.

Photos : ಸದನದಲ್ಲಿ ಗದ್ದಲ, ಅಹೋರಾತ್ರಿ ಧರಣಿ, ಮಾರ್ನಿಂಗ್ ವಾಕ್

ವಿಶ್ವಾಸ ಮತದ ಕುರಿತಂತೆ ಸದನದಲ್ಲಿ ಇನ್ನೂ ಚರ್ಚೆ ನಡೆಯುತ್ತಿದೆ. ವಿಶ್ವಾಸಮತ ಪ್ರಕ್ರಿಯೆ ಆರಂಭವಾದ ಬಳಿಕ ರಾಜ್ಯಪಾಲರು ಮಧ್ಯಪ್ರವೇಶ ಮಾಡುವಂತಿಲ್ಲ. ಕ್ರಿಯಾಲೋಪದ ಮೇಲೆ ಇನ್ನೂ ರೂಲಿಂಗ್ ನೀಡಿಲ್ಲ. ಚರ್ಚೆ ಮುಗಿದ ಬಳಿಕ ರೂಲಿಂಗ್ ಮಾಡಲು ನಮಗೆ ಅವಕಾಶ ನೀಡುತ್ತಾರೆ ಎಂದು ತಿಳಿಸಿದರು.

Karnataka political crisis siddaramaiah speaker is supreme in assembly

ಸಿದ್ದು ಮಾಡಿದರೆ ಗರತೀತನ, ಬೇರೆಯವರ ಮಾಡಿದರೆ ಹಾದರವೇ: ಬಿಜೆಪಿ ಶಾಸಕಸಿದ್ದು ಮಾಡಿದರೆ ಗರತೀತನ, ಬೇರೆಯವರ ಮಾಡಿದರೆ ಹಾದರವೇ: ಬಿಜೆಪಿ ಶಾಸಕ

'ಬಿಜೆಪಿಯವರು ಹಣ ನೀಡಿದ್ದರು ಎಂಬ ಬಗ್ಗೆ ನಾನು ಹೇಳಿದ್ದಾ ಅಥವಾ ಶ್ರೀನಿವಾಸಗೌಡ ಹೇಳಿದ್ದಾ? ಶ್ರೀನಿವಾಸಗೌಡ ಅವರು ಬಿಜೆಪಿ ಮುಖಂಡರ ಹೆಸರು ಸಮೇತ ಹೇಳಿದ್ದಾರೆ. ವ್ಯಾಪಾರ ಮಾಡಿ ಶಾಸಕರನ್ನು ಮುಂಬೈಗೆ ಕಳುಹಿಸಿರುವ ಬಿಜೆಪಿಯವರು ಆತುರದಲ್ಲಿದ್ದಾರೆ ಎಂದು ಟೀಕಿಸಿದರು.

ಅಂದು ಸಿದ್ದರಾಮಯ್ಯ ವಿರುದ್ಧ, ಇಂದು ಸಿದ್ಧರಾಮಯ್ಯಗೇ ಬದ್ಧ!: ಜೆಡಿಎಸ್ ಸ್ಥಿತಿಅಂದು ಸಿದ್ದರಾಮಯ್ಯ ವಿರುದ್ಧ, ಇಂದು ಸಿದ್ಧರಾಮಯ್ಯಗೇ ಬದ್ಧ!: ಜೆಡಿಎಸ್ ಸ್ಥಿತಿ

ಚರ್ಚೆ ಇನ್ನೂ ಮುಗಿದಿಲ್ಲ. 20 ಶಾಸಕರು ಇದರಲ್ಲಿ ಭಾಗವಹಿಸಬೇಕಿದೆ. ಇದು ಇಂದು ಮುಗಿಯುತ್ತದೆ ಎಂದು ನನಗೆ ಅನಿಸುತ್ತಿಲ್ಲ. ಸೋಮವಾರವೂ ಇದು ಮುಂದುವರಿಯಬಹುದು ಎಂದು ಹೇಳಿದರು.

English summary
Karnataka political crisis: CLP leader Siddaramaiah on Friday said that, Speaker is the Supreme in assembly. He will decide how to rule the session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X