ಅಥ್ಲಿಟ್ ಹಿಮಾ ದಾಸ್ಗೆ 10 ಲಕ್ಷ ಬಹುಮಾನ ಘೋಷಿಸಿದ ಪರಮೇಶ್ವರ್
ಬೆಂಗಳೂರು, ಜು.14: ಫಿನ್ಲ್ಯಾಂಡ್ನ ಟ್ಯಾಂಪಿಯರ್ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ನ ಮಹಿಳೆಯರ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತದ ಚಿನ್ನಾ ಗೆದ್ದು ಇತಿಹಾಸ ನಿರ್ಮಿಸಿರುವ 'ಹಿಮಾದಾಸ್' ಅವರಿಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು 10 ಲಕ್ಷ ರುಪಾಯಿ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.
ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ನ ಭಾಗವಾಗಿ ನಗದು ಬಹುಮಾನವನ್ನು ಘೋಷಣೆ ಮಾಡಲಾಗಿದೆ. ಅಥ್ಲೆಟಿಕ್ ಟ್ರ್ಯಾಕ್ ವಿಭಾಗದಲ್ಲಿ ಚಿನ್ನಾ ಗೆದ್ದ ಭಾರತದಲ್ಲೇ ಮೊದಲ ಕ್ರೀಡಾ ಪಟು ಹಿಮಾದಾಸ್ ಅವರು. ಹಳ್ಳಿ ಹುಡುಗಿಯಾದ ಹಿಮಾದಾಸ್ ಅವರ ಈ ಸಾಧನೆ ಲಕ್ಷಾಂತರ ಯುವ ಕ್ರೀಡಾಪಟಗಳಿಗೆ ಮಾದರಿಯಾಗಿದೆ ಎಂದು ಪರಮೇಶ್ವರ್ ಶ್ಲಾಘಿಸಿದ್ದಾರೆ.
ಹಿಮಾ ದಾಸ್ ದೇಶಭಕ್ತಿ ಮೆಚ್ಚಿಕೊಂಡ ಪ್ರಧಾನಿ ನರೇಂದ್ರ ಮೋದಿ
ನಾನೂ ಕೂಡ ಅಥ್ಲೆಟಿಕ್ ಆಗಿದ್ದವನು. ಕಾಲೇಜು ದಿನಗಳಲ್ಲಿ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್ಶಿಪ್ ಸ್ಪರ್ಥೆಯಲ್ಲಿ ಗೆದ್ದಿದೆ. ಇವರ 10.9 ಸೆಕೆಂಡ್ನ ಗೆಲುವನ್ನು ಇನ್ನೂ ಯಾರೂ ಮುರಿಯಲು ಸಾಧ್ಯವಾಗಿಲ್ಲ.
ಅಲ್ಲದೇ, ಸಾಕಷ್ಟು ರಾಷ್ಟ್ರೀಯ ಮಟ್ಟದಲ್ಲಿ ಜಯಗಳಿಸಿದ್ದೆ. ಒಲಂಪಿಕ್ಸ್ನಲ್ಲಿ ಭಾಗವಹಿಸಲು ತರಬೇತಿ ಕೂಡ ಪಡೆದಿದ್ದೆ ಎಂದು ಕ್ರೀಡೆ ಮೇಲಿರುವ ಅವರ ಆಸಕ್ತಿ ಬಿಚ್ಚಿಟ್ಟಿದ್ದಾರೆ. ಇವರು ಪ್ರಸ್ತುತ ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ನ ಅಧ್ಯಕ್ಷರು ಹಾಗೂ ಆಲ್ಇಂಡಿಯಾ ಅಥ್ಲೆಟಿಕ್ ಫೆಡರೇಷನ್ನ ಉಪಾಧ್ಯಕ್ಷರಾಗಿದ್ದಾರೆ. ಹಿಮಾದಾಸ್ ಅವರಂತೆ ಯುವಕರು ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ತೋರಿ, ಮುಂದೆ ಬರಬೇಕು ಎಂದು ಕರೆನೀಡಿದ್ದಾರೆ.