ರಾಜ್ಯದ ಐದು ಕಡೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ಬೆಂಗಳೂರು, ಸೆ.6: ಬೆಳಗಾವಿ, ಮೈಸೂರು, ಹುಬ್ಬಳ್ಳಿ, ಗುಲ್ಬರ್ಗಾ ಹಾಗೂ ಬಳ್ಳಾರಿಯಲ್ಲಿ ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಬೆಳಗಾವಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ ಎಂದು ವೈದ್ಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ ತಿಳಿಸಿದ್ದಾರೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ನರರೋಗ,
ಹೃದ್ರೋಗ,
ಮೂತ್ರ
ಪಿಂಡ
ಸಮಸ್ಯೆ
ಸೇರಿದಂತೆ
ಗಂಭೀರ
ಆರೋಗ್ಯ
ಸಮಸ್ಯೆ
ಎದುರಾದಾಗ
ಚಿಕಿತ್ಸೆ
ಪಡೆಯಲು
ಇನ್ನು
ಮುಂದೆ
ಖಾಸಗಿ
ಸೂಪರ್
ಸ್ಪೆಷಾಲಿಟಿ
ಆಸ್ಪತ್ರೆಗಳ
ಮೊರೆ
ಹೋಗಬೇಕಿಲ್ಲ.
ರಾಜ್ಯ
ಸರ್ಕಾರವೇ
ರಾಜ್ಯದ
ಐದು
ಕಡೆ
ಇಂಥ
ಆಸ್ಪತ್ರೆಗಳನ್ನು
ಸ್ಥಾಪಿಸಲು
ಮುಂದಾಗಿದೆ.
ಹಾಲಿ
ಸರ್ಕಾರಿ
ವೈದ್ಯಕೀಯ
ಕಾಲೇಜು
ಹಾಗೂ
ಆಸ್ಪತ್ರೆಗಳನ್ನು
ಸುಧಾರಿಸಲಾಗುವುದು,
ಪ್ರತಿ
ಜಿಲ್ಲೆಗೊಂದು
ವೈದ್ಯಕೀಯ
ಕಾಲೇಜು
ಸ್ಥಾಪಿಸುವುದು
ನಮ್ಮ
ಉದ್ದೇಶ
ಎಂದರು.
ರಾಜ್ಯದಲ್ಲಿ 6 ಹೊಸ ವೈದ್ಯ ಕಾಲೇಜು ಗಳನ್ನು ಸ್ಥಾಪಿಸಲು ಸರಕಾರ ನಿರ್ಧರಿಸಿದೆ. ಆದರೆ ಇದಕ್ಕೆ ಈ ವರ್ಷಭಾರತೀಯ ವೈದ್ಯ ಮಂಡಳಿ ಅನುಮತಿ ಸಿಕ್ಕಿಲ್ಲ. ಹೀಗಾಗಿ ಮುಂದಿನ ವರ್ಷ ದಿಂದ ಈ ಕಾಲೇಜುಗಳನ್ನು ಆರಂಭಿಸಲಾಗುವುದು. ಇತ್ತೀಚೆಗೆ ಕರ್ನಾಟಕಕ್ಕೆ ಭೇಟಿ ನೀಡಿದ್ದ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರು ಗುಲ್ಬರ್ಗಾದಲ್ಲಿ ಏಮ್ಸ್ ಸ್ಥಾಪನೆ ಶಿಫಾರಸು ಪರಿಗಣಿಸುವುದಾಗಿ ಹೇಳಿದ್ದಾರೆ.[ಜೆನರಿಕ್ ಔಷಧಿ ಖರೀದಿಗೆ ಪ್ರತ್ಯೇಕ ನಿಗಮ]
ಹೆಚ್ಚುವರಿ ನೇಮಕಾತಿ ಅಗತ್ಯ: ಹೊಸ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಿಗೆ ಅಗತ್ಯವಿರುವ ವೈದ್ಯ ಸಿಬ್ಬಂದಿ ನೇಮಕ ಪ್ರಕ್ರಿಯೆ ಆರಂಭಿಸಲಾಗಿದೆ. ಈಗಾಗಲೇ ರಾಯಚೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಅಗತ್ಯ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಬೆಳಗಾವಿ ವೈದ್ಯ ಕಾಲೇಜಿ ನಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಕೇಳಲಾಗಿದೆ. ವರದಿ ಬಂದ ತಕ್ಷಣ ಅವಶ್ಯ ಸಿಬ್ಬಂದಿ ನೇಮಕ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರಕಾರ ಆರಂಭಿ ಸಿದ್ದ ಜೆನರಿಕ್ ಔಷಧ ಕೇಂದ್ರಗಳನ್ನು ನಮ್ಮ ಸರಕಾರ ಮುಚ್ಚಿಲ್ಲ. ಆದರೆ ಬಿಜೆಪಿ ನಾಯಕರು ವಿನಾಕಾರಣ ನಮ್ಮ ಮೇಲೆ ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದರು.