112 ಕೋಟಿ ರೂಪಾಯಿ ಬರ ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ
Recommended Video
ಬೆಂಗಳೂರು, ಜನವರಿ.27: ಕರ್ನಾಟಕದ 14 ಜಿಲ್ಲೆಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಬರ ನಿರ್ವಹಣೆಗೆ ಬರೋಬ್ಬರಿ 112 ಕೋಟಿ ರುಪಾಯಿ ಅನುದಾನವನ್ನು ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ರಾಜ್ಯದ 14 ಜಿಲ್ಲೆಗಳ 49 ತಾಲೂಕುಗಳನ್ನು ಬರಪೀಡಿತ ಎಂದು ಗುರುತಿಸಲಾಗಿದೆ. ಈ ತಾಲೂಕುಗಳಲ್ಲಿ ಬರ ನಿರ್ವಹಣೆಗೆ ಜಿಲ್ಲಾವಾರು ಅನುದಾನವನ್ನು ಸರ್ಕಾರವು ಘೋಷಣೆ ಮಾಡಿದೆ. ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ರೈತರಿಗೆ ಆಘಾತ ನೀಡಿದ್ದ ಆದೇಶ ಹಿಂಪಡೆದ ಸರ್ಕಾರ
ಬೇಸಿಗೆ ಕಾಲದಲ್ಲಿ ಬರದ ತೀವ್ರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರವು ಸೂಚನೆ ನೀಡಿದೆ. ಇನ್ನು, ರಾಜ್ಯ ಸರ್ಕಾರವು ಬಿಡುಗಡೆಗೊಳಿಸಿರುವ ಬರ ನಿರ್ವಹಣೆಯ ಹಣವು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಪಿಡಿ ಖಾತೆಗೆ ಜಮೆ ಆಗಲಿದೆ. ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳಿಗೆ ಈ ಅನುದಾನವನ್ನು ಬಳಕೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಹಾಗಿದ್ದಲ್ಲಿ ಯಾವ ಯಾವ ಜಿಲ್ಲೆಗೆ ಸರ್ಕಾರದಿಂದ ಅದೆಷ್ಟು ಪರಿಹಾರ ಘೋಷಣೆ ಆಗಿದೆ ಎಂಬುದರ ಪಟ್ಟಿ ಇಲ್ಲಿದೆ ನೋಡಿ.
ಬರಪೀಡಿತ ಜಿಲ್ಲೆ ಹಾಗೂ ಸರ್ಕಾರ ಘೋಷಿಸಿದ ಪರಿಹಾರ:
ಬರಪೀಡಿತ ಜಿಲ್ಲೆ | ಪರಿಹಾರ ಧನ |
ಬಳ್ಳಾರಿ | 15 ಕೋಟಿ ರುಪಾಯಿ |
ದಾವಣಗೆರೆ | 14 ಕೋಟಿ ರುಪಾಯಿ |
ಚಿತ್ರದುರ್ಗ | 13 ಕೋಟಿ ರುಪಾಯಿ |
ಬೆಂಗಳೂರು ಗ್ರಾಮಾಂತರ | 10 ಕೋಟಿ ರುಪಾಯಿ |
ಚಿಕ್ಕಬಳ್ಳಾಪುರ | 10 ಕೋಟಿ ರುಪಾಯಿ |
ಕೋಲಾರ | 10 ಕೋಟಿ ರುಪಾಯಿ |
ಬೀದರ್ | 5 ಕೋಟಿ ರುಪಾಯಿ |
ಚಾಮರಾಜನಗರ | 5 ಕೋಟಿ ರುಪಾಯಿ |
ಕೊಪ್ಪಳ | 5 ಕೋಟಿ ರುಪಾಯಿ |
ರಾಮನಗರ | 5 ಕೋಟಿ ರುಪಾಯಿ |
ವಿಜಯಪುರ | 5 ಕೋಟಿ ರುಪಾಯಿ |
ತುಮಕೂರು | 5 ಕೋಟಿ ರುಪಾಯಿ |
ರಾಯಚೂರು | 5 ಕೋಟಿ ರುಪಾಯಿ |
ಯಾದಗಿರಿ | 5 ಕೋಟಿ ರುಪಾಯಿ |