RSS-ಬಿಜೆಪಿಯವರ ಸಂಚಿನಿಂದ ಕರ್ನಾಟಕದ ಸೋಲು: ಕಾಂಗ್ರೆಸ್
ಬೆಂಗಳೂರು, ಜುಲೈ 23: 'ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಆರೆಸ್ಸೆಸ್ ಬಿಜೆಪಿಯವರ ಸಂಚಿನಿಂದ ಕರ್ನಾಟಕ ಸೋತಿದೆ' ಎಂದು ವಿಶ್ವಾಸಮತದಲ್ಲಿ ಸೋತ ಕಾಂಗ್ರೆಸ್ ಟ್ವೀಟ್ ಮಾಡಿದೆ.
ವಿಶ್ವಾಸಮತದಲ್ಲಿ ಸೋಲು; ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಪತನ
ಸಮ್ಮಿಶ್ರ ಸರ್ಕಾರ ವಿಶ್ವಾಸ ಮತ ಸಾಬೀತುಪಡಿಸುವಲ್ಲಿ ಕಂಡ ಸೋಲವನ್ನು ಕರ್ನಾಟಕದ ಸೋಲು ಎಂದು ಕಾಂಗ್ರೆಸ್ ಬಣ್ಣಿಸಿದೆ. ಇದು ಪ್ರಜಾಪ್ರಭುತ್ವಕ್ಕೆ ತಾತ್ಕಾಲಿಕ ಸೋಲು ಎಂದೂ ಅದು ಹೇಳಿದೆ.
ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ ಎಚ್. ಡಿ. ಕುಮಾರಸ್ವಾಮಿ
"ದುಷ್ಟ ಶಕ್ತಿಯ ಗೆಲುವು ಎಂದಿಗೂ ಕ್ಷಣಿಕ. ಯಾವಾಗಲೂ ಸತ್ಯ ಉಳಿಯುತ್ತದೆ, ಪ್ರಜಾಪ್ರಭುತ್ವ ಗೆಲ್ಲುತ್ತದೆ. ಜನಾದೇಶಕ್ಕೆ ಗೌರವ ನೀಡದವರ, ಭ್ರಷ್ಟ ನಿರ್ಮೂಲನೆಯಾಗುತ್ತದೆ. ಎಂದಿಗೂ ಒಳ್ಳೆಯತನ ಕೊನೆತನಕ ಬಾಳುತ್ತದೆ. ನಮ್ಮನ್ನು ಬೆಂಬಲಿಸಿದ ಜನರಿಗೆ ಕಾಂಗ್ರೆಸ್ ಧನ್ಯವಾದ ಅರ್ಪಿಸುತ್ತದೆ" ಎಂದು ಟ್ವೀಟ್ ಮಾಡಲಾಗಿದೆ.
ವಿಧಾನಸಭೆಯಲ್ಲಿ ಇಂದು ನಡೆದ ವಿಶ್ವಾಸ ಮತ ಪ್ರಕ್ರಿಯೆಯಲ್ಲಿ 205 ಶಾಸಕ ಬಲದ ಸದನಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕೇವಲ 99 ಶಾಸಕರ ಬೆಂಬಲವನ್ನಷ್ಟೇ ಪಡೆದು ಬಹುಮತ ಕಳೆದುಕೊಂಡಿತು. 105 ಶಾಸಕ ಬೆಂಬಲ ಪಡೆದ ಬಿಜೆಪಿ ಸರ್ಕಾರ ರಚಿಸಲಿದ್ದು, ಈಗಾಗಲೇ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ.