ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ಹುಳುಕು ತೋರಿಸಲು ಹೋದ ಬಿಜೆಪಿ ಬಣ್ಣ ಬಯಲು

ಹೈಕಮಾಂಡ್ ನಾಯಕರ ಆದೇಶ, ಕರ್ನಾಟಕ ಉಸ್ತುವಾರಿ ಮುರಳೀಧರರಾವ್ ಅವರ ಸಂಧಾನ, ಕಾರ್ಯಕಾರಿಣಿ ಸಭೆ ಎಲ್ಲವೂ ಫೇಲ್ ಆಗಿದೆ. ಕರ್ನಾಟಕ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ

By ಅನುಷಾ ರವಿ
|
Google Oneindia Kannada News

ಬೆಂಗಳೂರು, ಮೇ 11 : ಹೈಕಮಾಂಡ್ ನಾಯಕರ ಆದೇಶ, ಕರ್ನಾಟಕ ಉಸ್ತುವಾರಿ ಮುರಳೀಧರರಾವ್ ಅವರ ಸಂಧಾನ, ಕಾರ್ಯಕಾರಿಣಿ ಸಭೆ ಎಲ್ಲವೂ ಫೇಲ್ ಆಗಿದೆ. ಕರ್ನಾಟಕ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಕಾಂಗ್ರೆಸ್ ಸರ್ಕಾರ ವಿರುದ್ಧ ಬಿಜೆಪಿ ಕರೆದಿದ್ದ ಸುದ್ದಿಗೋಷ್ಠಿಗೆ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಗೈರು ಹಾಜರಾಗಿದ್ದಾರೆ.

ಕಾಂಗ್ರೆಸ್ ಹುಳುಕು ತೋರಿಸಲು ಹೋದ ಬಿಜೆಪಿ ಬಣ್ಣ ಬಯಲಾಗಿದೆ. ಬಿಜೆಪಿ ಬಿಕ್ಕಟ್ಟು ಯಾವ ಮಟ್ಟದಲ್ಲಿದೆ ಎಂಬುದು ಎಲ್ಲರ ಮುಂದೆ ಬಹಿರಂಗವಾಗಿದೆ.

Karnataka BJP's display of unity is a fail, Eshwarappa missing from meet
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ತಯಾರಿಸಿರುವ ಚಾರ್ಜ್ ಶೀಟ್ ವುಳ್ಳ ಕಿರುಹೊತ್ತಿಗೆಯನ್ನು ಪ್ರದರ್ಶಿಸಿದರು. ಸಿದ್ದರಾಮಯ್ಯ ಅವರು ನನ್ನ ಸರಳ ಪ್ರಶ್ನೆಗೆ ಉತ್ತರಿಸಲಿ, ಯಾವ ಯಾವ ಯೋಜನೆಗೆ ಎಷ್ಟೆಷ್ಟು ಹಣ ಮಂಜೂರಾಗಿದೆ. ಎಷ್ಟೆಷ್ಟು ವಿನಿಯೋಗಿಸಲಾಗಿದೆ ಎಂಬುದನ್ನು ಜನತೆಗೆ ತಿಳಿಸಲಿ ಎಂದರು>
Karnataka BJP's display of unity is a fail, Eshwarappa missing from meet

ಬಿಎಸ್ ಯಡಿಯೂರಪ್ಪ ಅವರ ಜತೆಗೆ ಬಿಜೆಪಿ ಮುಖಂಡರಾದ ಆರ್ ಅಶೋಕ್, ಅಶ್ವಥನಾರಾಯಣ, ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಕಂಡು ಬಂದರು.

Karnataka BJP's display of unity is a fail, Eshwarappa missing from meet

ಬಿಜೆಪಿ ನಾಯಕರ ಸಂಧಾನ, ಮೈಸೂರಿನಲ್ಲಿ ನಡೆದ ಕಾರ್ಯಕಾರಿಣಿ ನಂತರವೂ ಬಿಜೆಪಿ ಈಗಲೂ ಮನೆಯೊಂದು ಮೂರು ಬಾಗಿಲಾಗಿದೆ.

English summary
Despite intervention from central leaders and glorifying statements on unity, Karnataka BJP is a divided party and is making no efforts to conceal the same. In the very first press meet to slam the Congress post the BJP's state executive meet where leaders harped on unity, rebel leader K S Eshwarappa was missing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X