ಜಂಟಿ ಅಧಿವೇಶನಕ್ಕೆ ಹಾಜರಾಗುವಂತೆ ಬಿಜೆಪಿ ಎಲ್ಲ ಶಾಸಕರಿಗೆ ವಿಪ್ ಜಾರಿ
ಬೆಂಗಳೂರು,
ಫೆಬ್ರವರಿ.16:
ವಿಧಾನಸಭಾ
ಜಂಟಿ
ಅಧಿವೇಶನಕ್ಕೆ
ಕಡ್ಡಾಯವಾಗಿ
ಹಾಜರಾಗಲು
ಬಿಜೆಪಿಯ
ಎಲ್ಲ
ಶಾಸಕರಿಗೆ
ಆಡಳಿತಪಕ್ಷದ
ಮುಖ್ಯ
ಸಚೇತಕ
ಸುನೀಲ್
ಕುಮಾರ್
ವಿಪ್
ಜಾರಿಗೊಳಿಸಿದ್ದಾರೆ.
ಭಾನುವಾರ
ಮುಖ್ಯಮಂತ್ರಿ
ಬಿ.ಎಸ್.ಯಡಿಯೂರಪ್ಪ
ನೇತೃತ್ವದಲ್ಲಿ
ಬಿಜೆಪಿ
ಶಾಸಕಾಂಗ
ಸಭೆ
ನಡೆಸಲಾಯಿತು.
ಸಿಎಂ
ನೇತೃತ್ವದ
ಸಭೆಯಲ್ಲಿ
ವಿಧಾನ
ಪರಿಷತ್
ಚುನಾವಣೆ
ಮತ್ತು
ವಿಧಾನಸಭಾ
ಕಲಾಪದಲ್ಲಿ
ಕಾಂಗ್ರೆಸ್
ಮತ್ತು
ಜೆಡಿಎಸ್
ಶಾಸಕರ
ತಂತ್ರಕ್ಕೆ
ಪ್ರತಿತಂತ್ರ
ರೂಪಿಸುವ
ಬಗ್ಗೆ
ಚರ್ಚೆ
ನಡೆಸಲಾಯಿತು.
ಅರ್ಧ
ಗಂಟೆಗಳ
ಕಾಲ
ನಡೆದ
ಸಭೆಯಲ್ಲಿ
ಮೊದಲಿಗೆ
ಸಿಎಂ
ನೂತನ
ಸಚಿವರಿಗೆ
ಸ್ವಾಗತ
ಕೋರಿದರು.
ಉತ್ತರ
ಕರ್ನಾಟಕಕ್ಕೆ
ಸಿಹಿ
ಸುದ್ದಿ
ಕೊಟ್ಟ
ಕರ್ನಾಟಕ
ಸರ್ಕಾರ
ಸೋಮವಾರ
ನಡೆಯಲಿರುವ
ಜಂಟಿ
ಅಧಿವೇಶನಕ್ಕೆ
ಎಲ್ಲ
ಬಿಜೆಪಿ
ಶಾಸಕರು
ಹಾಜರ್
ಇರಬೇಕು
ಎಂದು
ಸ್ವತಃ
ಮುಖ್ಯಮಂತ್ರಿ
ಬಿ.ಎಸ್.ಯಡಿಯೂರಪ್ಪ
ಖಡಕ್
ಸೂಚನೆಯನ್ನು
ನೀಡಿದ್ದಾರೆ
ಎಂದು
ಹೇಳಲಾಗುತ್ತಿದೆ.
ವಿಧಾನ
ಪರಿಷತ್
ಚುನಾವಣೆಯಲ್ಲಿ
ಒಗ್ಗಟ್ಟಿನ
ಮಂತ್ರ:
ಇನ್ನು,
ವಿಧಾನ
ಪರಿಷತ್
ಚುನಾವಣೆಯು
ನಡೆಯಲಿದ್ದು
ಬಿಜೆಪಿ
ಶಾಸಕರೆಲ್ಲ
ಒಗ್ಗಟ್ಟಿನ
ಮಂತ್ರಿ
ಜಪಿಸುತ್ತಿದ್ದಾರೆ.
ಸೋಮವಾರ
ಒಟ್ಟಿಗೆ
ಮತದಾನ
ಮಾಡಲು
ಬಿಜೆಪಿ
ಶಾಸಕಾಂಗ
ಸಭೆಯಲ್ಲಿ
ತೀರ್ಮಾನ
ಮಾಡಲಾಯಿತು.
ಬೆಳಗ್ಗೆ
8.30ರ
ಸಮಯಕ್ಕೆ
ಸಮ್ಮೇಳನ
ಸಭಾಂಗಣದಲ್ಲಿ
ಒಟ್ಟಾಗಿ
ಸೇರಲು
ನಿರ್ಧರಿಸಿದ್ದು,
ಅಲ್ಲಿಂದ
ಒಟ್ಟಾಗಿ
ತೆರಳಿ
ಮತ
ಚಲಾಯಿಸಲು
ಬಿಜೆಪಿ
ನಾಯಕರೆಲ್ಲ
ಮುಂದಾಗಿದ್ದಾರೆ.
ಇನ್ನು,
ವಿಧಾನ
ಪರಿಷತ್
ಚುನಾವಣೆಯಲ್ಲಿ
ಭಾಗವಹಿಸಿದ
ಬಳಿಕ
ಜಂಟಿ
ಅಧಿವೇಶನಕ್ಕೆ
ಆಗಮಿಸುವಂತೆ
ಎಲ್ಲ
ಶಾಸಕರಿಗೂ
ವಿಪ್
ಜಾರಿಗೊಳಿಸಲಾಗಿದೆ.