ನಕಲಿ ಮತಚೀಟಿ ಸೃಷ್ಟಿ ಕಾಂಗ್ರೆಸ್ ಫಿಲಾಸಫಿ: ಪ್ರಕಾಶ್ ಜಾವಡೇಕರ್
ಬೆಂಗಳೂರು, ಮೇ 9: ನಕಲಿ ಮತದಾರರ ಚೀಟಿ ಸೃಷ್ಟಿಸುವುದು ಕಾಂಗ್ರೆಸ್ನ ಫಿಲಾಸಫಿ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಆರೋಪಿಸಿದರು.
ನಿಜವಾದ ಮತದಾರರು ನಿಮಗೆ ಮತ ನೀಡದಿದ್ದರೆ, ನಕಲಿ ಮತದಾರರನ್ನು ಸೃಷ್ಟಿಸಿ ಎನ್ನುವುದು ಕಾಂಗ್ರೆಸ್ ನೀತಿ. ಮಂಗಳವಾರ ರಾತ್ರಿ ದೊರೆತಿರುವುದು ಬೃಹತ್ ಸಮುದ್ರದಲ್ಲಿನ ಚಿಟಿಕೆ ಉಪ್ಪು ಮಾತ್ರ ಎಂದು ಪ್ರಜಾಶ್ ಜಾವಡೇಕರ್ ಹೇಳಿದರು.
ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆಯನ್ನು ಮುಂದೂಡಬೇಕು. ಸೈಬರ್ ಭದ್ರತಾ ದಳದಿಂದ ತಕ್ಷಣವೇ ತೀವ್ರವಾದ ತನಿಖೆ ಪ್ರಾರಂಭಿಸಬೇಕು ಮತ್ತು ಫ್ಲಾಟ್ ಮಾಲೀಕ ಮಂಜುಳಾ ಅವರನ್ನು ಕೂಡಲೇ ಬಂಧಿಸಬೇಕು. ಈ ಮೂರು ಬೇಡಿಕೆಗಳನ್ನು ಈಡೇರಿಸುವಂತೆ ನಾವು ಒತ್ತಾಯಿಸುತ್ತೇವೆ ಎಂದರು.
Congress' philosophy is that if real voters don't vote for you, create fake voters. What happened yesterday is just the tip of the iceberg: Union Minister Prakash Javadekar on 9,746 voter ID cards recovered from a flat in Bengaluru's Jalahalli area #KarnatakaElections2018 pic.twitter.com/qI7wG2aIVn
— ANI (@ANI) 9 May 2018
ರಾಜರಾಜೇಶ್ವರಿ ನಗರದಲ್ಲಿ ಮತದಾರರ ನಕಲಿ ಗುರುತಿನ ಚೀಟಿ ಪತ್ತೆಯಾಗಿದ್ದು, ಅದು ಹಾಲಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು ಗುರುತಿನ ಚೀಟಿಗಳನ್ನು ದುರುಪಯೋಗಪಡಿಸಿಕೊಳ್ಳಲು ಮಾಡಿರುವ ಪ್ರಯತ್ನ ಎಂದು ಬಿಜೆಪಿ ದೂರಿದೆ.