ಲಂಡನ್ To ಬೆಂಗಳೂರು: ವಿಶೇಷ ವಿಮಾನದಲ್ಲಿ ಸ್ವದೇಶಕ್ಕೆ 323 ಕನ್ನಡಿಗರು
ಬೆಂಗಳೂರು,
ಮೇ.10:
ನೊವೆಲ್
ಕೊರೊನಾ
ವೈರಸ್
ಹರಡುವಿಕೆ
ಭೀತಿ
ನಡುವೆಯೇ
ವಿದೇಶಗಳಲ್ಲಿ
ಸಿಲುಕಿರುವ
ಭಾರತೀಯರನ್ನು
ಸ್ವದೇಶಕ್ಕೆ
ಕರೆ
ತರಲು
ಕೇಂದ್ರ
ಸರ್ಕಾರವು
ವಂದೇ
ಭಾರತ್
ಮಿಷನ್
ಆರಂಭಿಸಿದೆ.
ಲಂಡನ್
ನಲ್ಲಿ
ಸಿಲುಕಿದ್ದ
323
ಕನ್ನಡಿಗರನ್ನು
ಹೊತ್ತ
ವಿಶೇಷ
ವಿಮಾನವು
ಮೇ.11ರ
ಮಧ್ಯರಾತ್ರಿ
3
ಗಂಟೆಗೆ
ಬೆಂಗಳೂರಿನ
ಕೆಂಪೇಗೌಡ
ಅಂತಾರಾಷ್ಟ್ರೀಯ
ವಿಮಾನ
ನಿಲ್ದಾಣಕ್ಕೆ
ಆಗಮಿಸಲಿದೆ.
ಕನ್ನಡಿಗರ
ಮೊದಲ
ತಂಡವನ್ನು
ಸ್ವಾಗತಿಸಲು
ಎಲ್ಲ
ಸಿದ್ಧತೆಗಳನ್ನು
ಮಾಡಿಕೊಳ್ಳಲಾಗಿದೆ.
ವಿದೇಶದಿಂದ ಭಾರತಕ್ಕೆ ಬರಲು, ಇಲ್ಲಿಂದ ವಿದೇಶಕ್ಕೆ ತೆರಳಲು ಮಾರ್ಗಸೂಚಿ
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಕನ್ನಡಿಗರು ಬಂದು ಇಳಿಯುತ್ತಿದ್ದಂತೆ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಪ್ರಯಾಣಿಕರ ಸಂಪೂರ್ಣ ಪರೀಕ್ಷೆ, ಸ್ಕ್ರೀನಿಂಗ್ ವ್ಯವಸ್ಥೆಯ ಪರಿಶೀಲನೆಗೆ ಸ್ವತಃ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಏರ್ ಪೋರ್ಟ್ ಗೆ ತೆರಳಲಿದ್ದಾರೆ.
ಭಾರತಕ್ಕೆ ಆಗಮಿಸಿದ ಬಳಿಕ ಪ್ರಯಾಣಿಕರು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ. ಒಂದೊಮ್ಮೆ ಸ್ಕ್ರೀನಿಂಗ್ ಸಂದರ್ಭದಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿದರೆ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. 14 ದಿನಗಳ ಕ್ವಾರಂಟೈನ್ ಅವಧಿ ಬಳಿಕ ನಡೆಸಿದ ತಪಾಸಣೆಯಲ್ಲಿ ಕೊರೊನಾ ವೈರಸ್ ನೆಗಟಿವ್ ಬಂದಿದ್ದಲ್ಲಿ ಮಾತ್ರ ಮನೆಗೆ ತೆರಳಲು ಅವಕಾಶ ನೀಡಲಾಗುತ್ತದೆ.
United Kingdom: Indian passengers arrive at London Airport for the evacuation flight to Bengaluru (Karnataka) today. #VandeBharatMission pic.twitter.com/WVpVj4AJeu
— ANI (@ANI) May 10, 2020
ಇನ್ನೊಂದಡೆ ಕೌಲಾಲಂಪುರದಿಂದ 177 ಭಾರತೀಯರನ್ನು ಹೊತ್ತ ಏರ್ ಇಂಡಿಯಾದ IX 683 ವಿಮಾನ ಕೇರಳದ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.