ಜೂನ್ನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ
ಧಾರವಾಡದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಎರಡು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹಿಂದಿನ, ಇಂದಿನ ಮತ್ತು ಭವಿಷ್ಯದ ಕನ್ನಡ ಭಾಷೆಗೆ ಸಂಬಂಧಿಸಿದ ವಿಚಾರಗೋಷ್ಠಿಗಳು ನಡೆಯಲಿವೆ. ಶತಮಾನೋತ್ಸವದ ಸಮಾರೋಪ ಕಾರ್ಯಕ್ರಮ ಮೈಸೂರಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಹಾಲಂಬಿ ಹೇಳಿದರು.[ಕನ್ನಡ ಸಾಹಿತ್ಯ ಪರಿಷತ್ತು ನಡೆದ ಬಂದ ದಾರಿ]
ಕನ್ನಡ ಸಾಹಿತ್ಯ ಪರಿಷತ್ ನೂರು ವರ್ಷದ ಹೆಜ್ಜೆ ಗುರುತನ್ನು ವಿವರಿಸುವ ಸಾಕ್ಷ್ಯಚಿತ್ರವನ್ನು ಸಂಗೀತಾ ನಿರ್ದೇಶಕ ಹಂಸಲೇಖಾ ನಿರ್ದೆಶಿಸಿದ್ದಾರೆ. ಸಮಾರಂಭದ ಪ್ರಯುಕ್ತ, ಎರಡು ದಿನ ಬೆಂಗಳೂರಿನಲ್ಲಿ ಹಲ್ಮಿಡಿ ಹಬ್ಬವನ್ನು ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಶತಮಾನತ್ಸೋವ ಸಮಾರಂಭ:ಕನ್ನಡ ಸಾಹಿತ್ಯ ಪರಿಷತ್ನ ಶತಮಾನೋತ್ಸವ ಸಮಾರಂಭವನ್ನು 2014-15ರ ಸಾಲಿನಲ್ಲಿ ಒಂದು ವರ್ಷಗಳ ಕಾಲ ರಾಜ್ಯದ ನಾನಾ ಭಾಗಗಳಲ್ಲಿ ನಡೆಯಲಿದೆ. ಈ ಸಮಾರಂಭಕ್ಕೆ ರಾಜ್ಯ ಸರ್ಕಾರ 10 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿದೆ. ಅನುದಾನದಲ್ಲಿ ಬೆಂಗಳೂರಿನಲ್ಲಿ 5 ಕೋಟಿ ರೂಪಾಯಿಯಲ್ಲಿ ಶತಮಾನೋತ್ಸವ ಭವನ ನಿರ್ಮಾಣವಾಗಲಿದೆ.
ಒಂದು ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಕನ್ನಡ ಸಾಹಿತ್ಯದ ಕಾವ್ಯ, ನಾಟಕ, ಸಣ್ಣಕಥೆ ಮುಂತಾದ ಕನ್ನಡ ಸಾಹಿತ್ಯದ ಸಂಪುಟಗಳ ಪ್ರಕಟಣೆ, ಒಂದು ಕೋಟಿ ರೂ. ವೆಚ್ಚದಲ್ಲಿ 3 ಮೌಲಿಕ ಗ್ರಂಥಗಳು ಪ್ರಕಟಣೆಯಾಗಲಿದೆ.