ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನ.1ರ ರಾಜ್ಯೋತ್ಸವ ಸಾಂಸ್ಕೃತಿಕ ಮೆರವಣಿಗೆಗೆ ಸಜ್ಜಾಗಿದೆ ಮಲ್ಲೇಶ್ವರ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 23: ಇನ್ನು ಕೆಲವೇ ದಿನಗಳಲ್ಲಿ ಕನ್ನಡ ಮಾಸ ಆರಂಭವಾಗಲಿದೆ. ನವೆಂಬರ್ 1 ರ ಕನ್ನಡ ರಾಜ್ಯೋತ್ಸವಕ್ಕೆ ಈಗಾಗಲೇ ಉದ್ಯಾನನಗರಿ ಸಿಂಗರಿಸಿಕೊಂಡಿದ್ದು, ಬೆಂಗಳೂರಿನ ಮಲ್ಲೇಶ್ವರ ಸಾಂಸ್ಕೃತಿಕ ಮೆರವಣಿಗೆಗೆ ಸಜ್ಜಾಗಿದೆ.

ಕರ್ನಾಟಕದ ಜನರಲ್ಲಿ ಕನ್ನಡದ ಜಾಗೃತಿ, ಅಸ್ಮಿತೆಯನ್ನು ಮೂಡಿಸಿದ 1982 ರ ಗೋಕಾಕ್ ಚಳವಳಿಯ ಸ್ಮರಣೆಗಾಗಿ ಈ ಬಾರಿಯ ನವೆಂಬರ್ ಮೊದಲ ದಿನವನ್ನು(92 ನೇ ಕನ್ನಡ ರಾಜ್ಯೋತ್ಸವ) ಮೀಸಲಿಡಲು ನಿರ್ಧರಿಸಲಾಗಿದೆ ಎಂದು ಮಲ್ಲೇಶ್ವರ ಶಾಸಕ ಸಿ.ಎನ್.ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.

Kannada Rajyotsav: Cultural rally in Malleshwaram to remember Gokak movement

ಕನ್ನಡದಲ್ಲೇ ನಾಮಫಲಕಕ್ಕೆ ಕೊನೆಗೂ ಕಾನೂನು ರೂಪಿಸಲು ನಿರ್ಧಾರಕನ್ನಡದಲ್ಲೇ ನಾಮಫಲಕಕ್ಕೆ ಕೊನೆಗೂ ಕಾನೂನು ರೂಪಿಸಲು ನಿರ್ಧಾರ

ನವೆಂಬರ್ 1 ರ, ಗುರುವಾರ ಬೆಳಿಗ್ಗೆ 10 ಗಂಟೆಗೆ ಮಲ್ಲೇಶ್ವರ ಆಟದ ಮೈದಾನದಿಂದ, ಸಂಪಿಗೆ ರಸ್ತೆಯ ಮೂಲಕ ಸಿಇಟಿ ಸೆಲ್ ಬಳಿ ಇರುವ ವೃತ್ತದವರೆಗೆ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಇದರೊಟ್ಟಿಗೆ ಮಲ್ಲೇಶ್ವರ 18 ನೇ ಅಡ್ಡರಸ್ತೆಯ ಸಿಇಟಿ ಸೆಲ್ ಎದುರಿನ ವೃತ್ತಕ್ಕೆ 'ಗೋಕಾಕ್ ಚಳವಳಿ ಸ್ಮರಣಾರ್ಥ' ವೃತ್ತ ಎಂದು ಹೆಸರಿಟ್ಟು, ಈ ವೃತ್ತವನ್ನು ಇದೇ ದಿನ ಲೋಕಾರ್ಪಣೆಗೊಳಿಸಲಾಗುತ್ತಿದೆ. ಗೋಕಾಕ್ ಚಳವಳಿಯ ಹರಿಕಾರ, ಕನ್ನಡದ ವರನಟ ಡಾ.ರಾಜಕುಮಾರ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಲಾಗುತ್ತಿದೆ.

ಕನ್ನಡ ಕಲಿಕೆ ಬಗ್ಗೆ ಅಭಿಮಾನ ಇರಲಿ, ಅಂಧಾಭಿಮಾನವಲ್ಲ: ಭೋಜೆ ಗೌಡಕನ್ನಡ ಕಲಿಕೆ ಬಗ್ಗೆ ಅಭಿಮಾನ ಇರಲಿ, ಅಂಧಾಭಿಮಾನವಲ್ಲ: ಭೋಜೆ ಗೌಡ

ಈ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ವಿಜಯ ಪ್ರಕಾಶ್ ಮತ್ತು ತಂಡದವರು ಸಂಗಿತ ಸುಧೆ ಹರಿಸಲಿದ್ದು, ಗೋಕಾಕ್ ಚಳವಳಿ ಕುರಿತು ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಸಹೃದಯ ಕನ್ನಡಾಭಿಮಾನಿಗಳು ಬಂದು ಈ ಕನ್ನಡದ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಬೇಕಾಗಿ ಶಾಸಕ ಅಶ್ವತ್ಥನಾರಾಯಣ್ ಅವರು ಕೋರಿದ್ದಾರೆ.

ಕನ್ನಡ ಆಡಳಿತ ಭಾಷೆಯಾಗಲು ಕುಮಾರಣ್ಣನ ದಿಟ್ಟ ಹೆಜ್ಜೆಕನ್ನಡ ಆಡಳಿತ ಭಾಷೆಯಾಗಲು ಕುಮಾರಣ್ಣನ ದಿಟ್ಟ ಹೆಜ್ಜೆ

ಗೋಕಾಕ್ ಚಳವಳಿಯ ಮಹತ್ವವನ್ನು ಕಿರುವಿಡಿಯೋ ಮೂಲಕ ತಿಳಿಸಿರುವ ಅಶ್ವತ್ಥನಾರಾಯಣ್ ಅವರು
"1982 ರಲ್ಲಿ ಸಾಮಾನ್ಯ ಜನತೆಯಲ್ಲೂ ಕನ್ನಡ ಜಾಗೃತಿ ಮೂಡಿಸಿದ್ದ ಗೋಕಾಕ್ ಚಳುವಳಿ, ಡಾ. ರಾಜ್ ಕುಮಾರ್ ರವರ ಮುಂದಾಳತ್ವದ ಪಾಲ್ಗೊಳ್ಳುವಿಕೆಯಿಂದ ಮನೆ ಮನೆಗೂ ತಲುಪುವಂತಾಗಿತ್ತು. ಈ ಯಶಸ್ವಿ ಚಳುವಳಿಯನ್ನು ಮೆಲುಕು ಹಾಕಿ, ಕನ್ನಡದ ವೈಭವದ ಚರಿತ್ರೆಯ ಪುಟವನ್ನು ಇಂದಿನ ಜನಾಂಗಕ್ಕೆ ಪರಿಚಯಿಸಬೇಕಿದೆ" ಎಂದು ಟ್ವೀಟ್ ಮಾಡಿದ್ದಾರೆ.

ನ.1 ರ ಕಾರ್ಯಕ್ರಮದಲ್ಲಿ ವಿವಿಧ ಸಾಹಿತಿಗಳು, ನಟರು ಸೇರಿದಂತೆ ಖ್ಯಾತನಾಮರು ಭಾಗವಹಿಸಲಿದ್ದಾರೆ.

English summary
A cultural rally will be taking place in Malleshwaram, Bengaluru on November 1st Kannada rajyotsav to remember Gokak movement. BJP MLA from Malleshwaram constituency, CN Ashwathnarayan said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X