Breaking: ದಲಿತ ಕವಿ ಡಾ. ಸಿದ್ದಲಿಂಗಯ್ಯ ನಿಧನ
ಬೆಂಗಳೂರು, ಜೂನ್ 11: ದಲಿತ ಕವಿ ಡಾ. ಸಿದ್ದಲಿಂಗಯ್ಯ ಅವರು ನಿಧನರಾಗಿದ್ದಾರೆ.
Recommended Video
ಬಂಡಾಯ
ಸಾಹಿತಿ
ಡಾ.
ಸಿದ್ದಲಿಂಗಯ್ಯ
(67)
ಇಂದು
ಬೆಂಗಳೂರಿನ
ಖಾಸಗಿ
ಆಸ್ಪತ್ರೆಯಲ್ಲಿ
ನಿಧನರಾಗಿದ್ದಾರೆ.
ಕೊರೊನಾ
ಸೋಂಕು
ತಗುಲಿದ್ದ
ಹಿನ್ನೆಲೆಯಲ್ಲಿ
ಅವರು
ಖಾಸಗಿ
ಆಸ್ಪತ್ರೆಯಲ್ಲಿ
ಚಿಕಿತ್ಸೆ
ಪಡೆಯುತ್ತಿದ್ದರು.
ಸಿದ್ದಲಿಂಗಯ್ಯ
ಅವರು
ಮಾಗಡಿ
ತಾಲೂಕಿನ
ಮಂಚನಬೆಲೆ
ಗ್ರಾಮದಲ್ಲಿ
1954ರಲ್ಲಿ
ಜನಿಸಿದರು.
ವಿದ್ಯಾರ್ಥಿ
ದೆಸೆಯಲ್ಲಿಯೇ
ಇವರು
ಉತ್ತಮ
ಭಾಷಣಕಾರರಾಗಿದ್ದರು.
ಅಂಬೇಡ್ಕರ್,
ಪೆರಿಯಾರ್,
ವಸುದೇವಭೂಪಾಲ,
ಲೋಹಿಯಾ
ಮುಂತಾದವರ
ವಿಚಾರಧಾರೆಗಳಿಂದ
ಆಕರ್ಷಿತರಾಗಿದ್ದರು.
ಇಂದು ಸಂಜೆ 4.45ರ ಸುಮಾರಿಗೆ ಸಿದ್ದಲಿಂಗಯ್ಯ ಅವರು ನಿಧನರಾಗಿದ್ದು, ಇಂದೇ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿದ್ದಲಿಂಗಯ್ಯ ಅವರು ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದರು. ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದರು.
ಅವರ ಪತ್ನಿಗೂ ಕೊರೊನಾ ಸೋಂಕು ತಗುಲಿತ್ತು, ಈಗ ಚೇತರಿಸಿಕೊಂಡಿದ್ದಾರೆ, 1975ರಲ್ಲಿ ಅವರ ಹೊಲೆಮಾದಿಗ ಹಾಡು, ಕವನ ಸಂಕಲನ ಪ್ರಕಟಗೊಂಡಿತು, ಬಳಿಕ ಸಾವಿರಾರು ನದಿಗಳು, ಕಪ್ಪುಕಾಡಿನ ಹಾಡು, ಮೆರವಣಿಗೆ, ನನ್ನ ಜನಗಳು ಮತ್ತು ಇತರೆ ಕವಿತೆಗಳು, ಆಯ್ದ ಕವನಗಳು, ಅಲ್ಲೆಂಕುಂತವರು ಮುಂತಾದ ಕವನ ಸಂಕಲನ ಪ್ರಕಟಗೊಂಡಿದೆ.