ಕಲಬುರ್ಗಿ ಹತ್ಯೆ ತನಿಖೆ ಸರಿಯಾಗಿಯೇ ನಡೆಯುತ್ತಿದೆ: ಪರಮೇಶ್ವರ್
ಬೆಂಗಳೂರು, ನವೆಂಬರ್ 27: ವಿಚಾರವಾದಿ ಕಲಬುರ್ಗಿ ಅವರ ಹತ್ಯೆ ತನಿಖೆ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ತನಿಖೆ ಸರಿಯಾಗಿಯೇ ನಡೆಯುತ್ತಿದೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರ್ಗಿ ತನಿಖೆಯನ್ನು ರಾಜ್ಯ ಪೊಲೀಸರು ಸರಿಯಾದ ದಾರಿಯಲ್ಲಿಯೇ ಮಾಡುತ್ತಿದ್ದಾರೆ, ಆದರೆ ಕೋರ್ಟ್ಗೆ ಯಾವ ಕಾರಣಕ್ಕೆ ಅಸಮಾಧಾನವಾಗಿದೆಯೋ ತಿಳಿಯದು ಎಂದಿದ್ದಾರೆ.
ಎಂ.ಎಂ.ಕಲಬುರ್ಗಿ ಹತ್ಯೆ, ತನಿಖಾ ವರದಿ ಕೇಳಿದ ಸುಪ್ರೀಂಕೋರ್ಟ್
ಕಲಬುರ್ಗಿ ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಕೆಲವು ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ಸಹ ಸರಿಯಾದ ಮಾರ್ಗದಲ್ಲಿಯೇ ಇದೆ. ಈ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.
ಸಂಶೋಧಕ ಕಲ್ಬುರ್ಗಿ ಹತ್ಯೆ, ರಾಜ್ಯದ ತನಿಖೆಗೆ ಸುಪ್ರೀಂ ಅಸಮಾಧಾನ
ಕಲಬುರ್ಗಿ ಹತ್ಯೆಯಲ್ಲಿ ಎರಡು ರಾಜ್ಯಗಳ ಹಂತಕರ ಕೈವಾಡ ಇರುವುದು ಗೊತ್ತಾಗಿದ್ದು, ಎರಡು ರಾಜ್ಯಗಳ ಸಂಭಂಧಿಸಿದ ಪ್ರಕರಣ ಆದ್ದರಿಂದಲೂ ತನಿಖೆ ವಿಳಂಬವಾಗುತ್ತಿದೆ. ತನಿಖೆಗೆ ಕೆಲವು ನಿಯಮಗಳಿರುತ್ತವೆ ಹಾಗಾಗಿ ತನಿಖೆ ವಿಳಂಬವಾಗುತ್ತಿದೆ ಎಂದು ಅವರು ಹೇಳಿದರು.
ಪ್ರಶಸ್ತಿಗಳಿಂದ ಗಾವುದ ದೂರ ಉಳಿದಿದ್ದ ಕಲಬುರ್ಗಿ ಹೆಸರಿನಲ್ಲಿಯೇ ಪ್ರಶಸ್ತಿಯೇ?
ಅಂಬರೀಶ್ ಅಂತ್ಯಕ್ರಿಯೆ ಬಹು ಶಾಂತಯುತವಾಗಿ ಆಗಿದ್ದುದರ ಬಗ್ಗೆ ರಾಜ್ಯ ಪೊಲೀಸರಿಗೆ ಪರಮೇಶ್ವರ್ ಅವರು ಅಭಿನಂದನೆಗಳನ್ನು ಸಲ್ಲಿಸಿದರು.