ಸ್ಪೀಕರ್ ಕಾಗೋಡು ತಿಮ್ಮಪ್ಪಗೆ ಪತ್ನಿ ವಿಯೋಗ
ಬೆಂಗಳೂರು, ಜು. 31 : ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಮತ್ತು ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಪತ್ನಿ ಸುನಂದಾ ಅವರು ಹೃದಯಾಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಸಂಜೆ ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಕೆಲವು
ದಿನಗಳಿಂದ
ಉಸಿರಾಟದ
ತೊಂದರೆಯಿಂದ
ಬಳಲುತ್ತಿದ್ದ
ಸುನಂದಾ
(65)
ಅವರನ್ನು
ಹೆಬ್ಬಾಳ
ಸಮೀಪದ
ಕೊಲಂಬಿಯಾ
ಏಷ್ಯಾ
ಆಸ್ಪತ್ರೆಗೆ
ಮಂಗಳವಾರ
ದಾಖಲಿಸಲಾಗಿತ್ತು.
ಆದರೆ,
ಚಿಕಿತ್ಸೆ
ಫಲಕಾರಿಯಾಗದೆ
ಬುಧವಾರ
ಸಂಜೆ
ಅವರು
ಮೃತಪಟ್ಟಿದ್ದಾರೆ.
ಸುನಂದಾ ಅವರ ಮೃತದೇಹವನ್ನು ಯಲಹಂಕ ಸಮೀಪದ ನ್ಯಾಯಾಂಗ ಬಡಾವಣೆಯಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ. ಇಂದು ಬೆಳಗ್ಗೆ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಕುಟುಂಬ ವರ್ಗದವರು ಮಾಹಿತಿ ನೀಡಿದ್ದಾರೆ.
ಬುಧವಾರ
ಸಂಜೆ
ಮಾಜಿ
ಪ್ರಧಾನಿ
ಎಚ್.ಡಿ.ದೇವೇಗೌಡ,
ಮುಖ್ಯಮಂತ್ರಿ
ಸಿದ್ದರಾಮಯ್ಯ,
ಸಚಿವರಾದ
ಕೆ.ಜೆ.ಜಾರ್ಜ್,
ಮಹದೇವ
ಪ್ರಸಾದ್,
ಶಾಸಕರಾದ
ಎಸ್.ಆರ್.ವಿಶ್ವನಾಥ್
ಮುಂತಾದವರು
ಕಾಗೋಡು
ತಿಮ್ಮಪ್ಪ
ಅವರ
ನಿವಾಸಕ್ಕೆ
ತೆರಳಿ
ಪಾರ್ಥಿವ
ಶರೀರಕ್ಕೆ
ಅಂತಿಮ
ನಮನ
ಸಲ್ಲಿಸಿದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಸುನಂದಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮೃತರು ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಆಗಲಿದ್ದಾರೆ.