ಉಪ ಚುನಾವಣೆ; ಕೆ.ಆರ್.ಪುರದಲ್ಲಿ ಮತ್ತೆ ಬೈರತಿ ಗೆಲುವು
ಬೆಂಗಳೂರು, ಡಿಸೆಂಬರ್ 9: ಕೆ ಆರ್ ಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಅಂತಿಮಗೊಂಡಿದೆ. ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿದ್ದ, ಬಿ.ಎ.ಬಸವರಾಜು (ಬೈರತಿ ಬಸವರಾಜ್) ಅವರು ವಿಜಯದ ನಗೆ ಬೀರುವಲ್ಲಿ ಸಫಲರಾಗಿದ್ದಾರೆ. ಅವರು 63,405 ರ ಭಾರೀ ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.
ಕೆ.ಆರ್.ಪುರ: ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ, ಮತ್ತೆ ಬೈರತಿ ಬಸವರಾಜ್ ಗೆಲುವಿಗೆ ದಾರಿ?
ಬೈರತಿ ಬಸವರಾಜ್ ಒಟ್ಟು 1,39,833 ಸಾವಿರ ಮತಗಳನ್ನು ಪಡೆದರೆ, ಅವರ ವಿರುದ್ಧ ಸ್ಪರ್ಧಿಸಿದ್ದ, ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್ ನ ಎಂ.ನಾರಾಯಣ ಸ್ವಾಮಿ ಅವರು ಸೋಲು ಕಂಡಿದ್ದು, ಅವರು 76,428 ಮತಗಳ್ಳನ್ನಷ್ಟೇ ಪಡೆಯಲು ಸಫಲರಾಗಿದ್ದಾರೆ. ಸಿ.ಕೃಷ್ಣಮೂರ್ತಿ ಅವರು 20,048 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಬಿಬಿಎಂಪಿಯ ಪೂರ್ವ ಹೆಬ್ಬಾಗಿಲಿನಂತಿರುವ ಕೆ ಆರ್ ಪುರ ಕ್ಷೇತ್ರ ಈ ಹಿಂದೆ ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು. ಆದರೆ. ಬೈರತಿ ಬಸವರಾಜ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಉಪ ಚುನಾವಣೆಗೆ ಕಾರಣರಾದರು.
2018 ರ ವಿಧಾನಸಭೆ ಚುನಾವಣೆಯಲ್ಲಿ ಬೈರತಿ ಬಸವರಾಜ್ ಅವರು ಕಾಂಗ್ರೆಸ್ನಿಂದ ಬಿಜೆಪಿಯ ನಂದೀಶ್ ರೆಡ್ಡಿ ವಿರುದ್ಧ ಸ್ಪರ್ಧಿಸಿದ್ದಾಗ, 1,34,404 ಮತಗಳನ್ನು ಪಡೆದಿದ್ದರು. ಆಗ ಅವರ ಗೆಲುವಿನ ಅಂತರ 32,729 ಆಗಿತ್ತು. ಈಗ ನಂದೀಶ್ ರೆಡ್ಡಿ ಅವರನ್ನು ಬಿಎಂಟಿಸಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ.