ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ವಿಧಿವಶ
Recommended Video
ಬೆಂಗಳೂರು, ಜೂನ್ 10: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ,ಕನ್ನಡದ ಮೇರು ನಾಟಕಕಾರ, ಹಿರಿಯ ಸಾಹಿತಿ, ಗಿರೀಶ್ ಕಾರ್ನಾಡ್(81) ವಿಧಿವಶರಾಗಿದ್ದಾರೆ.
ಬೆಂಗಳೂರಿನ
ಲ್ಯಾವಲ್ಲೆರಸ್ತೆಯಲ್ಲಿರುವ
ತಮ್ಮ
ಮನೆಯಲ್ಲಿ
ಇಂದು
ಬೆಳಗ್ಗೆ
ಕೊನೆಯುಸಿರೆಳೆದಿದ್ದಾರೆ
ಎನ್ನುವ
ಮಾಹಿತಿ
ಲಭ್ಯವಾಗಿದೆ.ಕೆಲವು
ದಿನಗಳಿಂದ
ಬಹು
ಅಂಗಾಂಗ
ವೈಫಲ್ಯದಿಂದ
ಬಳಲುತ್ತಿದ್ದರು.
ಗಿರೀಶ್ ಕಾರ್ನಾಡ್ ಅವರು 1938ರ ಮೇ 19ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ತಂದೆ ಡಾ.ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾ ಬಾಯಿ. ಪ್ರಗತಿಶೀಲ ಮನೋಭಾವದ ಡಾ.ರಘುನಾಥ ಕಾರ್ನಾಡರು ಮದುವೆಯಾದ ಹೊಸತರಲ್ಲೇ ಪತ್ನಿಯನ್ನು ಕಳೆದುಕೊ೦ಡರು.
ಬಾಲ್ಯದಲ್ಲೇ ಮದುವೆಯಾಗಿ ಪತಿಯನ್ನು ಕಳೆದುಕೊಂಡಿದ್ದ 5 ವರ್ಷದ ಮಗ ವಸಂತನ ತಾಯಿ ಕೃಷ್ಣಾಬಾಯಿಯನ್ನು, ಸಮಾಜದ ವಿರೋಧದ ನಡುವೆಯೂ ದಿಟ್ಟತನದಿಂದ ಕೈ ಹಿಡಿದರು.
ಕಾರ್ನಾಡರಿಗೆ
ಸಂದ
ಪ್ರಶಸ್ತಿಗಳು
ರಾಜ್ಯೋತ್ಸವ
ಪ್ರಶಸ್ತಿ,
ಗುಬ್ಬಿ
ವೀರಣ್ಣ
ಪ್ರಶಸ್ತಿ,
ಕೇಂದ್ರ
ಸಂಗೀತ
ನಾಟಕ
ಅಕಾಡೆಮಿ
ಪ್ರಶಸ್ತಿ,
ಪದ್ಮಶ್ರೀ
-1974,
ಪದ್ಮಭೂಷಣ
-1992,
ಜ್ಞಾನಪೀಠ
-1998,ಕಾಳಿದಾಸ
ಸಮ್ಮಾನ್
-
1998ರಲ್ಲಿ
ಲಭಿಸಿವೆ.
ಗಿರೀಶರ ಪ್ರಾಥಮಿಕ ಶಿಕ್ಷಣ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಹಾಗೂ ಪದವಿ ಶಿಕ್ಷಣ ಕರ್ನಾಟಕ ಕಾಲೇಜಿನಲ್ಲಿ ಆಯಿತು.
ಆ
ಬಳಿಕ
ಹೋರ್ಡ್ಸ್
ಸ್ಕಾಲರ್ಶಿಪ್
ಪಡೆದುಕೊಂಡು
ಆಕ್ಸ್ಫರ್ಡ್ನಲ್ಲಿ
ಹೆಚ್ಚಿನ
ವ್ಯಾಸಂಗಕ್ಕೆ
ತೆರಳಿದರು.
ಗಿರೀಶ
ಕಾರ್ನಾಡರು
ಆಕ್ಸ್ಫರ್ಡ್
ಡಿಬೇಟ
ಕ್ಲಬ್
ಗೆ
ಅಧ್ಯಕ್ಷರಾಗಿ
ಆಯ್ಕೆಯಾದ
ಪ್ರಥಮ
ಏಷಿಯನ್
ಆಗಿದ್ದಾರೆ.
ತಮ್ಮ
ಓದು,
ಚರ್ಚೆಯನ್ನು
ದೇಶ
ವಿದೇಶದಲ್ಲೂ
ಹರಡಿ
ವಿದ್ವಾಂಸರ
ಸಖ್ಯದಲ್ಲಿ,
ಕಲಾಸೇವಕರ
ಸಹವಾಸದಲ್ಲಿ
ಗುರ್ತಿಸಿಕೊಂಡ
ಕಾರ್ನಾಡ್
ಬುದ್ಧಿಜೀವಿ
ಎನಿಸಿಕೊಂಡರು.
ಬಹುಭಾಷಾ ಪಂಡಿತರೆಂಬ ಹಿರಿಮೆಗೆ ಪಾತ್ರರಾಗಿ, ಷಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಕಾರ್ನಾಡ್ ಸೇವೆ ಸಲ್ಲಿಸಿದರು. ವಿದೇಶದಲ್ಲಿದ್ದಾಗಲೇ ಕನ್ನಡ ನಾಟಕಗಳನ್ನು ಬರೆದು ಇಲ್ಲಿಗೆ ಬಂದು ಹೊಸ ನಾಟಕಗಳ ಓದು, ಪ್ರದರ್ಶನಕ್ಕೆ ದಾರಿ ಮಾಡಿಕೊಂಡರು.
ಆಕ್ಸ್ಫರ್ಡ್ನಿಂದ
ಬಂದ
ನಂತರ
ಮದ್ರಾಸ್ನಲ್ಲಿ
ಆಕ್ಸ್
ಫ಼ರ್ಡ್
ಯೂನಿವರ್ಸಿಟಿ
ಪ್ರೆಸ್
ನಲ್ಲಿ
ಸಂಪಾದಕರಾಗಿ
ನೌಕರಿಯಲ್ಲಿದ್ದು,
ಅದನ್ನು
ತೊರೆದು
ಧಾರವಾಡಕ್ಕೆ
ವಾಪಾಸಾಗಿ
ನಾಟಕ
ಕ್ಷೇತ್ರದಲ್ಲಿ
ಕೃಷಿ
ನಡೆಸಿದರು.
ಇವರು
ಕನ್ನಡವಲ್ಲದೆ
ಹಿಂದಿ,
ಪಂಜಾಬಿ,
ಮರಾಠಿ
ಹಾಗೂ
ಭಾರತೀಯ
ಹಲವು
ಭಾಷೆಗಳಿಗೆ
ತಮ್ಮ
ನಾಟಕಗಳು
ಅನುವಾದಗೊಂಡು,
ಪ್ರದರ್ಶನಗೊಂಡವು.