ಬೆಂಗಳೂರು: ರಾತ್ರಿ ಕಳ್ಳರ ಕೈಚಳಕ- 12 ಲಕ್ಷ ಕಳ್ಳತನ
ಜಯನಗರ 4ನೇ 'ಟಿ' ಬ್ಲಾಕ್ ನಿವಾಸಿ ಕೃಷ್ಣಾ ಅಯ್ಯರ್ ಮನೆಯಲ್ಲಿ ಕಳ್ಳತನವಾಗಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ.
ಕೃಷ್ಣಾ ಅಯ್ಯರ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಶುಕ್ರವಾರ ಸಂಜೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಜೆ.ಪಿ.ನಗರದ ಪುಟ್ಟೇನಹಳ್ಳಿಯ ಕಲ್ಯಾಣ ಮಂಟಪಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಕಿಟಕಿ ಗಾಜು ಒಡೆದ ಕಳ್ಳರು ಬೀರುವಿನಲ್ಲಿಟ್ಟಿದ್ದ 12 ಲಕ್ಷ ರೂ. ಮತ್ತು 440 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.[ಮೇಲ್ಮನೆ ಚುನಾವಣೆ: ಜೆಡಿಎಸ್ನಿಂದ ಕೋಟಿ ಕೋಟಿ ಡೀಲ್?]
ಕೃಷ್ಣಾ ಅಯ್ಯರ್ ಕಾರ್ಯಕ್ರಮ ಮುಗಿಸಿ ರಾತ್ರಿ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.
Comments
English summary
Thieves struck at the residence in Jayanagr ,4th T Block when no one was at home and made away with some jewellery, police said today. House owner Krishna Iyer filed a complaint and Tilaknagar and are searching for the culprits. 440 gold Ornaments and Rs 12 lakh cash stolen.