ಜೆಡಿಎಸ್ ಮಾಧ್ಯಮ ಗ್ರೂಪ್ನಲ್ಲೇ ಪಕ್ಷದ ನಾಯಕರಿಗೆ ವಕ್ತಾರ ಧಮ್ಕಿ
ಬೆಂಗಳೂರು, ಜನವರಿ 25: ಜೆಡಿಎಸ್ ವಾಟ್ಸಪ್ ಗ್ರೂಪಿನಲ್ಲೇ ಜೆಡಿಎಸ್ ನಾಯಕರಿಗೆ ವಕ್ತಾರಾ ಆವಾಜ್ ಹಾಕಿದ್ದಾರೆ.
ಜೆಡಿಎಸ್ ವಕ್ತಾರ ಹಾಗೂ ಮಾಜಿ ಎಂಎಲ್ಸಿ ರಮೇಶ್ ಬಾಬು ಧರ್ಮಿ ಹಾಕಿದ್ದಾರೆ.ಪ್ರಸ್ತುತ ನಾನು JDS ಪಕ್ಷದಲ್ಲಿದ್ದು ಬೇರೆ ಪಕ್ಷ ಸೇರುವ ಪ್ರಶ್ನೆ ಇರುವುದಿಲ್ಲ. ಕೆಲವು ಪತ್ರಿಕೆಗಳಲ್ಲಿ ಬಂದಿರುವ ಮಾಹಿತಿ ಅಪೂರ್ಣವಾಗಿದ್ದು, ಜೆಡಿಎಸ್ನಲ್ಲಿ ಅವಕಾಶ ನೀಡದೇ ಹೋದರೆ ನಂತರ ಈ ಕ್ಷೇತ್ರದ ಮತದಾರರು ಮತ್ತು ಶಿಕ್ಷಕರ ಅಭಿಪ್ರಾಯ ಪಡೆದು ಮುಂದಿನ ರಾಜಕೀಯ ತೀರ್ಮಾನ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆ
ಜೂನ್ ತಿಂಗಳಲ್ಲಿ ನೆಡೆಯುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಒಬ್ಬ ಆಕಾಂಕ್ಷಿಯಾಗಿದ್ದು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ.
ಜೆಡಿಎಸ್ನಿಂದ ಅವಕಾಶ ಸಿಗುವ ನಂಬಿಕೆ ಇದೆ
JDS ನಲ್ಲಿ ನನಗೇ ಅವಕಾಶ ಸಿಗುವ ನಂಬಿಕೆ ಇದೆ. ಈಗಲೂ ಪಕ್ಷದಲ್ಲಿ ಸಕ್ರಿಯವಾಗಿದ್ದು ದೇವೇಗೌಡರು ವಹಿಸಿರುವ ಜವಾಬ್ದಾರಿಗೆ ಅನುಗುಣವಾಗಿ ಪಕ್ಷದ ಕೆಲಸ ಮಾಡುತ್ತಿದ್ದೇನೆ.
ಕೋಲಾರ ಜಿಲ್ಲೆಯ ಕೆಲವು ಮಾಧ್ಯಮಗಳಲ್ಲಿ ನಾನು ಬೇರೆ ಪಕ್ಷದಿಂದ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ವರದಿಯಾಗಿದೆ.
ಕೊಲ್ಲುವ ಬೆದರಿಕೆ ಪತ್ರ; ಕುಮಾರಸ್ವಾಮಿ ಹೇಳಿದ್ದೇನು?
ಜೆಡಿಎಸ್ನಲ್ಲಿ ಅವಕಾಶ ನೀಡದಿದ್ದರೆ ಬೇರೆ ದಾರಿ ಇಲ್ಲ
ಪ್ರಸ್ತುತ ನಾನು JDS ಪಕ್ಷದಲ್ಲಿದ್ದು ಬೇರೆ ಪಕ್ಷ ಸೇರುವ ಪ್ರಶ್ನೆ ಇರುವುದಿಲ್ಲ. ಕೆಲವು ಪತ್ರಿಕೆಗಳಲ್ಲಿ ಬಂದಿರುವ ಮಾಹಿತಿ ಅಪೂರ್ಣವಾಗಿದ್ದು, JDS ನಲ್ಲಿ ಅವಕಾಶ ನೀಡದೇ ಹೋದರೆ ನಂತರ ಈ ಕ್ಷೇತ್ರದ ಮತದಾರರು ಮತ್ತು ಶಿಕ್ಷಕರ ಅಭಿಪ್ರಾಯ ಪಡೆದು ಮುಂದಿನ ರಾಜಕೀಯ ತೀರ್ಮಾನ ಕೈಗೊಳ್ಳಲಾಗುವುದು.
40 ವರ್ಷಗಳಿಂದ ಜೆಡಿಎಸ್ನಲ್ಲಿ ದುಡಿಯುತ್ತಿದ್ದೇನೆ
ಈ ತೀರ್ಮಾನವನ್ನೂ ಕೆಲವೇ ದಿನಗಳಲ್ಲಿ ತೆಗೆದುಕೊಳ್ಳಲಿದ್ದೇನೆ.
ಪಕ್ಷದಲ್ಲಿ 40 ವರ್ಷಗಳಿಂದ ನಿರಂತರ ಕೆಲಸ ಮಾಡಿಕೊಂಡು ಬಂದಿದ್ದು, ನಮ್ಮ ನಾಯಕರು ನನಗೆ ಅನ್ಯಾಯ ಮಾಡುವುದಿಲ್ಲ ಎಂಬುವ ನಂಬಿಕೆ ಇದೆ.